Advertisement

ಒಂದೇ ಕಾರ್ಯಕ್ರಮದಲ್ಲಿ ಹಲವರ ಆಕ್ರೋಶಕ್ಕೆ ಗುರಿಯಾದ ನಾದಬ್ರಹ್ಮ!

12:18 PM Nov 15, 2021 | Team Udayavani |

ಬೆಂಗಳೂರು : ನೂರಾರು ಜನಪ್ರಿಯ ಗೀತೆಗಳ ಮೂಲಕ ಕನ್ನಡಿಗರ ಮನ ತಣಿಸಿದ್ದ ‘ನಾದಬ್ರಹ್ಮ’ ಬಿರುದಾಂಕಿತ ಮೇರು ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾರ್ಯಕ್ರವೊಂದರಲ್ಲಿ ಉದ್ವೇಗದ ಭರದಲ್ಲಿ ಆಡಿದ ಮಾತುಗಳು ಹಲವರ ಕೆಂಗಣ್ಣಿಗೆ ಗುರಿಯಾಗಿದೆ, ಆಕ್ರೋಶವನ್ನು ಎದುರಿಸಬೇಕಾಗಿ ಬಂದಿದೆ.

Advertisement

ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ದಲಿತರು, ಅಸ್ಪೃಶ್ಯತೆ ವಿಚಾರಕ್ಕೆ ಸಂಬಂಧಿಸಿ ಮಾತಿಗಿಳಿದ ಹಂಸಲೇಖ ಅವರು, ಹಲವು ವಿಚಾರಗಳನ್ನು ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. ಅವರ ಮಾತಿಗೆ ಹಲವರು ಬೆಂಬಲವನ್ನೂ ಸೂಚಿಸಿದ್ದು, ವ್ಯಾಪಕ ಆಕ್ರೋಶ ಎನ್ನುವುದು ಅವರನ್ನು ಕ್ಷಮೆ ಯಾಚಿಸುವಂತೆ ಮಾಡಿದೆ.

ಪೇಜಾವರ ಶ್ರೀಗಳ ಟೀಕೆ
ಭಾಷಣದ ವೇಳೆ ಪೇಜಾವರ ಶ್ರೀಗಳ ದಲಿತರ ಕೇರಿ ಭೇಟಿಯನ್ನು ಪ್ರಸ್ತಾವಿಸಿ, ಶ್ರೀಗಳು ಅಲ್ಲಿ ಹೋಗಿ ಕುಳಿತುಕೊಳ್ಳಬಹುದಷ್ಟೆ, ಕೋಳಿ, ಕುರಿ ಮಾಂಸ ಕೊಟ್ಟರೆ ತಿನ್ನುತ್ತಿದ್ದರೆ, ದಲಿತರ ಮನೆಗೆ ಬಲಿತರು ಹೋಗುವುದು
ಏನು ದೊಡ್ಡ ವಿಷಯ ಎಂದು ಪ್ರಶ್ನಿಸಿದ್ದರು.

ಹಂಸಲೇಖ ಅವರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಶ್ರೀಗಳ ಅಪಾರ ಭಕ್ತರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹಂಸಲೇಖ ಅವರು ಇಂತಹ ಹೇಳಿಕೆ ನೀಡುವುದು ಭೂಷಣವಲ್ಲ ಎಂದಿದ್ದರು. ಈಗಿನ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಪಾದರು ಹೇಳಿಕೆಯನ್ನು ಖಂಡಿಸಿದ್ದರು.

ರಾಜಕಾರಣಿಗಳ ಟೀಕೆ
ಜನಪ್ರಿಯ ಕಾರ್ಯಕ್ರಮವಾದ ಗ್ರಾಮ ವಾಸ್ತವ್ಯವನ್ನೂ ಟೀಕಿಸಿದ್ದ ಹಂಸಲೇಖ ಅವರು, ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದರು. ಈಗ ನಗರದಲ್ಲಿರುವ ಆರ್. ಅಶೋಕ್ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ್ ಅವರೂ ಮಾಡುತ್ತಿದ್ದಾರೆ ಎಲ್ಲರೂ ಮಾಡುತ್ತಿದ್ದಾರೆ ಎಂದಿದ್ದರು. ಇದು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ಇದನ್ನೂ ಓದಿ: ಪೇಜಾವರ ಶ್ರೀ ಮಾಂಸ ತಿನ್ನುತ್ತಿದ್ದರೇ ? :ತೀವ್ರ ಆಕ್ರೋಶ, ಕ್ಷಮೆ ಯಾಚಿಸಿದ ಹಂಸಲೇಖ

ಬಿಳಿಗಿರಿ ರಂಗನ ಕಥೆ
ಬಿಳಿಗಿರಿ ರಂಗಯ್ಯ ಸೋಲಿಗ ಜನಾಂಗದ ಹೆಣ್ಣಿನೊಂದಿಗೆ ರಮಿಸಿದರೆ ಅದು ದೊಡ್ಡ ವಿಷಯವೇ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತಾಗುತ್ತಿತ್ತು.. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣಿನೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ ಎಂದು ಹಂಸಲೇಖ ಪೌರಾಣಿಕ ನಂಬಿಕೆಯನ್ನು ಪ್ರಶ್ನಿಸಿದ್ದರು, ಇದು ಹಲವು ಭಕ್ತರ ವಿರೋಧದ ಪ್ರತಿಕ್ರಿಯೆಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next