Advertisement

ಸ್ವದೇಶ್‌ ದರ್ಶನ್‌ 2.0ಯಡಿ ಹಂಪಿ, ಮೈಸೂರು ಅಭಿವೃದ್ಧಿ

09:15 PM Jan 05, 2023 | Team Udayavani |

ಹೊಸದಿಲ್ಲಿ: ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು “ಸ್ವದೇಶ್‌ ದರ್ಶನ್‌’ನ 2ನೇ ಆವೃತ್ತಿಯನ್ನು ಆರಂಭಿಸಿದ್ದು, ಕರ್ನಾಟಕದ ಹಂಪಿ ಮತ್ತು ಮೈಸೂರು ನಗರವನ್ನು ಆಯ್ಕೆ ಮಾಡಲಾಗಿದೆ.

Advertisement

ಪ್ರವಾಸೋದ್ಯಮದ ಅಭಿವೃದ್ಧಿಯೇ ಈ ಯೋಜನೆಯ ಉದ್ದೇಶ. 2ನೇ ಆವೃತ್ತಿಯಲ್ಲಿ 19 ರಾಜ್ಯಗಳ 36 ಸ್ಥಳಗಳ ಅಭಿವೃದ್ಧಿಗೆ ಸಚಿವಾಲಯ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯೋಜನೆಯಲ್ಲಿ ಹಂಪಿ ಮತ್ತು ಮೈಸೂರು ಸೇರಿಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.

ಇದು ಪ್ರವಾಸೋದ್ಯಮ ಮತ್ತು ಥೀಮ್‌ ಆಧಾರಿತ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next