Advertisement

ಹಳ್ಳಿಹೊಳೆ: ಬೈಕಿಗೆ ಅಡ್ಡ ಬಂದ ನಾಯಿ; ಸಹಸವಾರನಿಗೆ ಗಂಭೀರ ಗಾಯ

12:01 AM Jan 09, 2023 | Team Udayavani |

ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಕಡಿಪಾಲು ಎಂಬಲ್ಲಿ ಬೈಕಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ, ಬೈಕ್‌ ಸ್ಕಿಡ್‌ ಆಗಿ ಬಿದ್ದು ಸವಾರರು ಗಾಯ ಗೊಂಡಿದ್ದಾರೆ.

Advertisement

ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಹಳ್ಳಿಹೊಳೆ ಗ್ರಾಮದ ಚಕ್ರಮೈದಾನ ಶ್ರೀನಿವಾಸ ಆಚಾರಿ (58) ಅವರ ತಲೆಗೆ ಗಂಭೀರ ಗಾಯಗಳಾಗಿವೆ.

ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next