Advertisement

ಹಾಲಿವಾಣ: ಮೋದಿ ರಥಯಾತ್ರೆಗೆ ಸ್ವಾಗತ

06:11 AM Feb 10, 2019 | |

ಮಲೇಬೆನ್ನೂರು: ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ಕ್ಷಣದಿಂದಲೂ ರಾಷ್ಟ್ರವು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಕಂಪನ್ನು ಬೀರಿ ವಿಶ್ವಗುರುವಾಗುವತ್ತ ಸಾಗಿದೆ. ಆದ್ದರಿಂದ ಭಾರತೀಯರೆಲ್ಲರೂ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಕೈಜೋಡಿಸಬೇಕೆಂದು ಹಾಲಿವಾಣ ಗ್ರಾಮದ ಟೀಮ್‌ ಮೋದಿ ಸಂಚಾಲಕ ಚೇತನ್‌ ಕುಮಾರ್‌ ಕರೆ ನೀಡಿದರು.

Advertisement

ಚಕ್ರವರ್ತಿ ಸೂಲಿಬೇಲೆ ಸಾರಥ್ಯದ‌ ಟೀಮ್‌ ಮೋದಿ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಸೇವಕನ ರಥಯಾತ್ರೆ ಪಟ್ಟಣ ಮತ್ತು ಸಮೀಪದ ಹಾಲಿವಾಣ ಗ್ರಾಮಗಳಲ್ಲಿ ಸಂಚರಿಸಿತು. ಯಾತ್ರೆಯು ಪಟ್ಟಣಕ್ಕೆ ಆಗಮಿಸಿದಾಗ ವಾಹನವನ್ನು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಲಾಯಿತು. ರಥಯಾತ್ರೆಯ ಎಲ್‌.ಇ.ಡಿ. ಸ್ಕ್ರಿನ್‌ ಮೂಲಕ ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳ ಕುರಿತ 30 ನಿಮಿಷಗಳ ವಿಡಿಯೋ ಪ್ರದರ್ಶನ ನಡೆಯಿತು. ಟೀಮ್‌ ಮೋದಿ ಸಂಚಾಲಕಿ ಶಾರದ, ಕಾರ್ತಿಕ್‌ ಮೋದಿ, ಜಿ.ಪಂ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ. ತಾ.ಪಂ ಮಾಜಿ ಸದಸ್ಯ ಐರಣಿ ಅಣ್ಣಪ್ಪ, ಕಜ್ಜರಿ ಹರೀಶ್‌, ರಾಜು ಪೂಜಾರ್‌, ಕೆ.ಎಸ್‌. ಮನೋಜ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next