Advertisement

ಉ.ಪ್ರ : ಶ್ಮಶಾನದ ಕೋಣೆಯಲ್ಲಿ ಸಾಧುವಿನ ಅರೆಸುಟ್ಟ ದೇಹ ಪತ್ತೆ

06:07 AM Jan 24, 2019 | udayavani editorial |

ಮುಜಫ‌ರನಗರ : ಇಲ್ಲಿನ ಬಸೇಡಾ ಗ್ರಾಮದಲ್ಲಿನ ಶ್ಮಶಾನದ ಕೋಣೆಯೊಂದರಲ್ಲಿ ಸಾಧು ಒಬ್ಬರ ಅರೆ ಸುಟ್ಟ ದೇಹ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ಸಾಧುವನ್ನು 36ರ ಹರೆಯದ ಬಾಲಕನಾಥ ಎಂದು ಗುರುತಿಸಲಾಗಿದೆ ಎಂದು ಎಸ್‌ಎಚ್‌ಓ ಸುಭಾಷ್‌ ರಾಥೋರ್‌  ತಿಳಿಸಿದ್ದಾರೆ.

ಕೋಣೆಯೊಳಗೆ ಚಳಿ ಕಾಯಿಸುವುದಕ್ಕಾಗಿ ಉರುವಲು ಸುಡಲಾಗುತ್ತಿದ್ದುದೇ ನಿದ್ದೆಯಲ್ಲಿದ್ದ  ಸಾಧುವಿನ ಸಾವಿಗೆ ಕಾರಣ ಇದ್ದಿರಬಹುದೆಂದು ಶಂಕಿಸಲಾಗಿದೆ. 

ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next