Advertisement

ಜೆಯುಡಿ ಮುಖ್ಯಸ್ಥ ಹಾಫೀಜ್‌ ಸಯೀದ್‌ ನ ಭಾವ ಅಬ್ದುರ್‌ ರೆಹಮಾನ್‌ ಮಕ್ಕಿ ಅರೆಸ್ಟ್‌

09:44 AM May 16, 2019 | Team Udayavani |

ಲಾಹೋರ್‌ : ಪಾಕಿಸ್ಥಾನ ಸರಕಾರವನ್ನು ಟೀಕಿಸಿ, ದ್ವೇಷ ಕಾರುವ ಭಾಷಣ ಮಾಡಿದ್ದಕ್ಕಾಗಿ ನಿಷೇಧಿತ ಜಮಾತ್‌ ಉದ್‌ ದಾವಾ ಉನ್ನತ ನಾಯಕ ಮತ್ತು ಮುಂಬಯಿ ಉಗ್ರ ದಾಳಿಯ ಸೂತ್ರಧಾರ ಹಾಫೀಜ್‌ ಸಯೀದ್‌ ನ ಭಾವ ಹಾಫೀಜ್‌ ಅಬ್ದುರ್‌ ರೆಹಮಾನ್‌ ಮಕ್ಕಿ ಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಜೆಯುಡಿ ಇದರ ರಾಜಕೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಮತ್ತು ಇದರ ದಾನ ಸಂಸ್ಥೆಯಾಗಿರುವ ಫ‌ಲಾಹ್‌ ಎ ಇನ್‌ಸಾನಿಯತ್‌ ಪ್ರತಿಷ್ಠಾನದ ಪ್ರಭಾರಿಯಾಗಿರುವ ಮಕ್ಕಿಯನ್ನು ಪೊಲೀಸರು ನಿಷೇಧಿತ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆ ವೇಳೆ ಬಂಧಿಸಿದರು.

ಲಾಹೋರ್‌ನಿಂದ 80 ಕಿ.ಮೀ. ದೂರದ ಗುಜರನ್‌ವಾಲಾ ಪಟ್ಟಣದಲ್ಲಿ ಮಾಡಿದ್ದ ದ್ವೇಷ ಕಾರುವ ಭಾಷಣಕ್ಕಾಗಿ ಮಕ್ಕಿಯ ಬಂಧನವಾಗಿರುವುದನ್ನು ಪಂಜಾಬ್‌ ಪೊಲೀಸ್‌ ವಕ್ತಾರ ನಬೀಲಾ ಘಜನ್‌ಫ‌ರ್‌ ದೃಢೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next