Advertisement

ಹಡಿಲು ಭೂಮಿಗೆ ಮುಕ್ತಿ ನೀಡುವ ಪುನಶ್ಚೇತನ ಯೋಜನೆ

07:16 PM Aug 14, 2021 | Team Udayavani |

ಉಡುಪಿ:  ಕೋವಿಡ್‌ ಸಹಿತ ಬದಲಾದ ಜನರ ಜೀವನಕ್ರಮದಿಂದ ನಗರಗಳಿಂದ ಹಳ್ಳಿಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದೆಷ್ಟೋ ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದ್ದ ಕೃಷಿ ಭೂಮಿಗಳನ್ನು ಹಡಿಲು ಬಿಟ್ಟು ಹೋದವರು ಈಗ ಮತ್ತೆ ಕೃಷಿಯತ್ತ ಆಸಕ್ತರಾಗುತ್ತಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್‌ನಡಿ ಈ ಕೆಲಸಕಾರ್ಯ ನಡೆದರೆ ಧರ್ಮಸ್ಥ ಳ ಗ್ರಾ.ಯೋಜನೆಯು ಕಳೆದ ಒಂದು ವರ್ಷ ಗಳಿಂದಲೂ ಹಡಿಲು ಭೂಮಿ ಕೃಷಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.

Advertisement

ಆಧುನಿಕತೆಯ ಪ್ರಭಾವ, ಉದ್ಯೋಗ ಅರಸಿ ಪಟ್ಟಣ ದತ್ತ ವಲಸೆ, ಕೃಷಿ ಕಾರ್ಮಿಕರ ಕೊರತೆ, ಅತಿಯಾದ ಬೇಸಾಯದ ಖರ್ಚು, ತೋಟಗಾರಿಕೆಯಂತಹ ವಾಣಿಜ್ಯ ಬೆಳೆಗಳ ಪ್ರಭಾವ, ಕೀಟ ರೋಗ ಬಾಧೆ,  ಬೆಳೆ ನಷ್ಟ, ಕಾಡು ಪ್ರಾಣಿಗಳ ಹಾವಳಿಯಿಂದ  ಕರಾವಳಿ ಜಿಲ್ಲೆಗಳಲ್ಲಿ ಭತ್ತ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತು. ಇಂತಹ ಸಂದ ರ್ಭ  ಕೇದಾರೋತ್ಥಾನ ಟ್ರಸ್ಟ್‌, ಧ.ಗ್ರಾ. ಯೋಜ ನೆ ನೀಡಿದ ಪ್ರೋತ್ಸಾಹ ಜನರಲ್ಲಿ ಹೊಸ ಆಶಾವಾದ ಹುಟ್ಟುಹಾಕಿದೆ.

ಕೃಷಿ ಕೂಲಿಯಾಳುಗಳ ಸಮಸ್ಯೆ :

ಬಹುತೇಕ ಕೃಷಿಕರ ಮಕ್ಕಳು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಬರುತ್ತಿರುವುದು, ಬೆಳೆದ ಉತ್ಪನ್ನಗಳಿಗೆ ಸೂಕ್ತ ದರ ಮತ್ತು ಮಾರುಕಟ್ಟೆ ಕೊರತೆ, ಸಕಾಲದಲ್ಲಿ ಯಂತ್ರೋಪಕರಣಗಳ ಅಲಭ್ಯತೆ, ಕೃಷಿ ಲಾಭದಾಯಕವಲ್ಲ ಎಂಬ ಭ್ರಮೆಯಿಂದಾಗಿ ಹೆಚ್ಚಿನ ಮಂದಿ ಕೃಷಿಯಲ್ಲಿ ತೊಡಗಲು ಹಿಂದೇಟು ಹಾಕುತ್ತಿದ್ದಾರೆ.

ವಿನೂತನ ಕ್ರಮ :

Advertisement

ಭತ್ತದ ಗದ್ದೆಗಳು ಈ ರೀತಿ ನಿರ್ಲಕ್ಷ್ಯಕ್ಕೊಳಗಾದ ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯು ಬೇಸಾಯದ ಖರ್ಚು ಕಡಿಮೆಗೊಳಿಸಿ ಅಧಿಕ ಇಳುವರಿ ಪಡೆಯಲು ಬೇಸಾಯ ಪದ್ಧತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಂಡು ಶ್ರೀ ಅಭಿಯಾನ, ಯಂತ್ರಶ್ರೀ, ಸಮಗ್ರ ಕೃಷಿ ಪದ್ಧತಿ, ಪರಿಸರ ಸ್ನೇಹಿ ಕೃಷಿ ಇತ್ಯಾದಿ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಹಕಾರ ನೀಡಿ ನಿರಂತರ ಆದಾಯ ಪಡೆಯಲು ಮಾರ್ಗದರ್ಶನ ನೀಡಲಾಗುತ್ತಿದೆ.

 ಹಡಿಲು ಅಭಿವೃದ್ಧಿಗೆ ಕೈಗೊಂಡ ಕ್ರಮಗಳು :

ಹಡಿಲು ಭೂಮಿ ರೈತರ ಗುರುತಿಸುವಿಕೆ ಮತ್ತು ದಾಖಲೀಕರಣ ಮಾಡಿ ಕೃಷಿಕರ ಪ್ರಗತಿಬಂಧು ಸಂಘಗಳನ್ನು ರಚಿಸಲಾಗಿದೆ. ಹಾಳುಬಿದ್ದ ಜಮೀನನ್ನು ಭೂಮಾಲಕರಿಂದ ಗೇಣಿ ಅಥವಾ ಉಚಿತವಾಗಿ ಒಪ್ಪಂದದ ಮೇಲೆ ಪಡೆದು ಕೃಷಿ ಮಾಡಲಾಗುತ್ತಿದೆ.

ರೈತರಿಗೆ ತರಬೇತಿ/ಪ್ರಾತ್ಯಕ್ಷಿಕೆ :

ಹಡಿಲು ಭೂಮಿ ಅಭಿವೃದ್ಧಿ ಕ್ಷೇತ್ರ ಉತ್ಸವ, ಕೃಷಿ ಯಂತ್ರೋಪಕಣ ಒದಗಣೆ, ರೈತರಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಕಾರಗಳನ್ನೂ ನೀಡಲಾಗುತ್ತಿದೆ.

ಗೇಣಿದಾರರೊಂದಿಗೆ ಒಪ್ಪಂದ :

ಪ್ರಗತಿಬಂಧು ತಂಡದ ಸದಸ್ಯರು ತಮ್ಮ  ವ್ಯಾಪ್ತಿಯ ಲ್ಲಿರುವ ಹಡಿಲು ಭೂಮಿಯನ್ನು ಗುರುತಿಸಿ ಅದರ ಮಾಲಕ ರೊಂದಿಗೆ  ಒಪ್ಪಂದ ಮಾಡಿಕೊಂಡು ಹಡಿಲು ಭೂಮಿ ಪಡೆದು 2ರಿಂದ 5 ವರ್ಷಗಳವರೆಗೆ ಭೂಮಾಲಕರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಅಭಿ ವೃದ್ಧಿ ಪಡಿಸಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಾರೆ. ಭೂ ಮಾಲಕರು, ಗೇಣಿದಾರರ ನಡುವೆ ಆದ ಒಳ ಒಪ್ಪಂದ ದಂತೆ ಅಲ್ಪಾವಧಿ ಕೃಷಿ (ಭತ್ತ, ತರಕಾರಿ, ಬಾಳೆ…ಇತ್ಯಾದಿ) ಮೂಲಕ ಹಡಿಲು ಭೂಮಿ ಅಭಿವೃದ್ಧಿ ಮಾಡಲಾಗಿದೆ.

 ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿ

ತಾಲೂಕು         ಪ್ರಸ್ತುತ ವರ್ಷ

(ಎಕ್ರೆ)   ಇದುವರೆಗೆ

(ಎಕ್ರೆ)

ಕಾರ್ಕಳ           50        201

ಉಡುಪಿ           62        285

ಬ್ರಹ್ಮಾವರ       44        174

ಕುಂದಾಪುರ     50        265

ಬೈಂದೂರು      50        154

ದ.ಕ., ಉಡುಪಿ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಮತ್ತು ಕಾರ್ಯಕರ್ತರ ಸಹಕಾರದಲ್ಲಿ ಇದುವರೆಗೆ ಒಟ್ಟು 1,391 ಎಕ್ರೆ ಹಡಿಲು ಭೂಮಿಯನ್ನು ಹಸುರು ಭೂಮಿಯನ್ನಾಗಿ ಪರಿವರ್ತನೆ ಮಾಡಿ 473 ಕುಟುಂಬಗಳಿಗೆ ಪ್ರಯೋಜನ ದೊರಕಿಸಲಾಗಿದೆ. ಈ ಬಗ್ಗೆ ಎಲ್ಲ ಗ್ರಾಮಗಳಿಗೂ ತೆರಳಿ ಒಕ್ಕೂಟದ ಸದಸ್ಯರು ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. -ದಿನೇಶ್‌, ನಿರ್ದೇಶಕರು, ಧ.ಗ್ರಾ. ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next