Advertisement

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

12:15 AM May 14, 2024 | Team Udayavani |

ಮಂಡ್ಯ: ತೆಲಂಗಾಣದ ಮೆಹಬೂಬ್‌ ನಗರದ ಸಮೀಪ ಸಂಭವಿಸಿದ ಅಪಘಾತದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಬಂದಿದ್ದರೆ ಕಿರುತೆರೆ ನಟಿ ಪವಿತ್ರಾ ಜಯರಾಂ ಸಾಯುತ್ತಿರಲಿಲ್ಲ ಎಂದು ಕಾರಿನಲ್ಲಿದ್ದ ಸ್ನೇಹಿತ ಹಾಗೂ ತೆಲುಗು ನಟ ಚಂದ್ರಕಾಂತ್‌ ಹೇಳಿದರು.

Advertisement

ಕಿರುತೆರೆ ನಟಿ ಪವಿತ್ರಾ ಜಯರಾಂ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆ್ಯಂಬುಲೆಲೆನ್ಸ್‌ ಸುಮಾರು 20 ನಿಮಿಷ ತಡವಾಗಿ ಬಂದಿದ್ದರಿಂದಲೇ ಪವಿತ್ರಾ ಸಾಯುವಂತಾಯಿತು ಎಂದರು.

ಕಾರಿನಲ್ಲಿ ನಾನು, ಪವಿತ್ರಾ, ಅವರ ಅಕ್ಕನ ಮಗಳು ಹಾಗೂ ಚಾಲಕ ಇದ್ದೆವು. 20 ನಿಮಿಷ ತಡವಾಗಿ ಬಂದ ಆ್ಯಂಬುಲೆನ್ಸ್‌ನಲ್ಲಿಯೇ ಪವಿತ್ರಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಬ್ರೈನ್ ಡೆಡ್‌ ಆಗಿದೆ ಎಂದು ಹೇಳಿದರು ಎಂದರು.

ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಪವಿತ್ರಾ ಜಯರಾಂ ಅವರ ಅಂತ್ಯಸಂಸ್ಕಾರವು ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಜಮೀನಿನಲ್ಲಿ ಸೋಮವಾರ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು. ಮೃತದೇಹ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಟಿಯ ಮನೆಯ ಮುಂದೆಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ತ್ರಿನಯಿನಿ ಧಾರಾವಾಹಿಯ ನಟ ಚಂದುಗೌಡ ಸಹಿತ ಹಲವಾರು ಕಿರುತೆರೆ ಕಲಾವಿದರು ಆಗಮಿಸಿ ಅಂತಿಮ ದರ್ಶನ ಪಡೆದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next