Advertisement

ಕಾಂಗ್ರೆಸ್‌ ವಿದಾಯದ ಮುನ್ಸೂಚನೆ ನೀಡಿದ ಎಚ್‌.  ವಿಶ್ವನಾಥ್‌

11:11 PM Apr 24, 2017 | Team Udayavani |

ಮೈಸೂರು: ಕಾಂಗ್ರೆಸ್‌ ಪಕ್ಷದಿಂದ ಯಾರು ಹೊರಹೋದರೂ ಸಿದ್ದರಾಮಯ್ಯ ಅವರಿಗೆ ಏನೂ ಅನಿಸುವುದಿಲ್ಲ. ಅವರ ಸ್ಥಾನ ಈಗ ಭದ್ರವಾಗಿದೆ. ಹೀಗಾಗಿ ಅವರಿಗೆ ಈಗ ನಮ್ಮಂಥವರು ಬೇಕಾಗಿಲ್ಲ ಎಂದು ಮಾಜಿ ಸಂಸದ ಎಚ್‌. ವಿಶ್ವನಾಥ್‌ ಗದ್ಗದಿತರಾದರು. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಇರಬೇಕೋ? ಬೇಡವೋ? ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿದೆ. ರಾಜಕೀಯದಲ್ಲಿ ಯಾವ ಕಾಲಕ್ಕೆ ಏನೂ ಬೇಕಾದರೂ ಆಗಿಬಿಡಬಹುದು. ಎಲ್ಲವೂ ಒಂದು ರೀತಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ. ಕೆಲ ವೊಮ್ಮೆ ಪಕ್ಷ ತೊರೆಯಲೇಬೇಕಾದ ಅನಿವಾರ್ಯತೆ ಕಾಡುತ್ತಿರುತ್ತದೆ. ಅಂತಹ ಅನಿವಾರ್ಯತೆ ಬಂದಿದೆ ಎನ್ನುವ ಮೂಲಕ ವಿಶ್ವನಾಥ್‌ ಕಾಂಗ್ರೆಸ್‌ ತೊರೆಯುವ ಸೂಚನೆ ನೀಡಿದ್ದಾರೆ. ಯಾವ ನಾಯಕರೂ ಇದುವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಜೆಡಿಎಸ್‌ನ ನಾಯಕರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ದೂರವಾಣಿ ಕರೆ ಮಾಡಿ ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next