Advertisement

ಕೃಷಿ ಕಾಯ್ದೆಗಳು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ: ಎಚ್.ಕೆ.ಪಾಟೀಲ

02:23 PM Nov 19, 2021 | Team Udayavani |

ಗದಗ: ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ ಇದಾಗಿದೆ. ಮೂರು ಕರಾಳ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ ರೈತರನ್ನು ಉಗ್ರರು, ದೇಶ ದ್ರೋಹಿಗಳು ಎಂದು ಅಪಮಾನಿಸಿದ್ದ ಬಿಜೆಪಿ ನಾಯಕರು ರೈತರ ಪಾದಸ್ಪರ್ಶಿಸಿ ಕ್ಷಮೆ ಕೋರಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ ಆಗ್ರಹಿಸಿದರು.

Advertisement

ಕಳೆದ ಒಂದು ವರ್ಷದಿಂದ ರೈತರು ಮಳೆ, ಗಾಳಿ ಚಳಿ ಎನ್ನದೇ ನಿರಂತರ ಪ್ರತಿಭಟನೆ ನಡೆಸಿದ್ದರು. ರೈತರ ಈ ಕಿಚ್ಚು ದೇಶ ವ್ಯಾಪಿ ಪಸರಿಸಿತ್ತು. ಹೋರಾಟದಲ್ಲಿ ತೊಡಗಿದವರಿಗೆ ನಕಲಿ ರೈತರು, ಉಗ್ರವಾದಿಗಳು, ದೇಶ ದ್ರೋಹಿಗಳ ಪಟ್ಟ ಕಟ್ಟಿದರು. ರೈತರು ಮೇಲೆ ಜೀಪ್ ಹಾಯಿಸಿ, ಕೊಲೆಗೆ ಯತ್ನಿಸಿದ್ದರು. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕೇಂದ್ರ ಸರಕಾರ ತನ್ನ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ಸಹಜವಾಗಿ ರೈತಾಪಿ ಸಮುದಾಯದಲ್ಲಿ ಸಮಾಧಾನ ತಂದಿದೆ.

ಇದನ್ನೂ ಓದಿ:ರೈತರ ಪ್ರತಿಭಟನೆ ಈಗಲೇ ನಿಲ್ಲಿಸುವುದಿಲ್ಲ: ರೈತ ನಾಯಕ ಟಿಕಾಯತ್

ರೈತ ಹೋರಾಟವನ್ನು ಬೆಂಬಲಿಸಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ದಿಟ್ಟ ನಿಲುವು ಪ್ರದರ್ಶಿಸಿದ್ದರು ಎಂದು ಇದೇ ವೇಳೆ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next