Advertisement

”ಹೇಳಲು ಮಲೆನಾಡು, ರಸ್ತೆಯಲ್ಲಿ ಎರಡು ಮರ ಕಾಣುತ್ತಾ, ಕರ್ಮ..”: ಶಾಸಕ ತಮ್ಮಯ್ಯ

03:22 PM Jun 05, 2023 | Team Udayavani |

ಚಿಕ್ಕಮಗಳೂರು: “ಹೇಳಲು ಮಲೆನಾಡು, ರಸ್ತೆಯಲ್ಲಿ ಎರಡು ಮರ ಕಾಣುತ್ತಾ… ಕರ್ಮ” ಎಂದು ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಶಾಸಕ ಎಚ್.ಡಿ ತಮ್ಮಯ್ಯ ಕ್ಲಾಸ್ ತೆಗೆದುಕೊಂಡರು.

Advertisement

ಚಿಕ್ಕಮಗಳೂರು ನಗರದ ಎ.ಐ.ಟಿ.ವೃತ್ತದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಮ್ಮಯ್ಯ, ಶಾಸಕರು, ನಗರಸಭೆ ಅಧ್ಯಕ್ಷರು ಬರುತ್ತಾರೆ, ಏನ್ ತಿಳಿದು ಕೊಂಡಿದ್ದಾರೆ, ಪ್ರೋಟೋಕಾಲ್ ಗೊತ್ತಿಲ್ವಾ? ಇವತ್ತು ಸರ್ಕಾರಿ ರಜೆ ಇದೆಯಾ? ಕಮಿಷನರ್ ಇಲ್ಲ ಅಂದರೆ, ಇನ್ ಚಾರ್ಜ್ ಯಾರಾದರೂ ಇರಬೇಕು ತಾನೆ? ಇನ್ನೊಮ್ಮೆ ಹೀಗೆ ಆದರೆ ಚೆನ್ನಾಗಿರುವುದಿಲ್ಲ, ವಿಶ್ವಾಸ-ಅಧಿಕಾರ ಎರಡೂ ಬೇರೆ ಬೇರೆ ಎಂದರು.

ಇದನ್ನೂ ಓದಿ:ರೈಲು ದುರಂತದ ಬಗ್ಗೆ ಕೇಳಿದರೆ ಬಿಜೆಪಿಯವರು ಕಾಂಗ್ರೆಸ್ ಮೇಲೆ ಆಪಾದನೆ ಮಾಡುತ್ತಾರೆ: ರಾಹುಲ್

ಪರಿಸರ ದಿನಾಚರಣೆಯನ್ನು ಪ್ರಪಂಚ ನೋಡುತ್ತಿರುತ್ತದೆ. ಇಡೀ ಸಿಟಿಯಲ್ಲಿ ಎಲ್ಲಾದರೂ ಎರಡು ಮರ ಕಾಣುತ್ತದೆಯೇ? ಹೇಳಲು ಮಲೆನಾಡು, ಎಲ್ಲಾದರೂ ರಸ್ತೆಯಲ್ಲಿ ಎರಡು ಮರ ಕಾಣುತ್ತದೆಯೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next