Advertisement

ಬಿಜೆಪಿ, ಕಾಂಗ್ರೆಸ್‌ ಸಹವಾಸವೇ ಬೇಡ: ರೇವಣ್ಣ

07:43 PM Nov 22, 2021 | Team Udayavani |

ಹಾಸನ: ವಿಧಾನ ಪರಿಷತ್‌ ಚುನಾವಣೆಯಲ್ಲಾಗಲಿ,  2023ರ ವಿಧಾನಸಭಾ ಚುನಾವಣೆಯಲ್ಲಾಗಲಿ ಕಾಂಗ್ರೆಸ್‌ ಅಥವಾ ಬಿಜೆಪಿಯ ಸಹವಾಸವೇ ಬೇಡ ಎಂದು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಮನವಿ ಮಾಡಿದರು.

Advertisement

ಪರಿಷತ್‌ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳಿಲ್ಲದ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಬೇಕೆಂದು ದೇವೇಗೌಡರೊಂದಿಗೆ ಚರ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ,  ಯಾವ ಮುಖವಿಟ್ಟುಕೊಂಡು ಯಡಿಯೂರಪ್ಪ  ಜೆಡಿಎಸ್‌ ಬೆಂಬಲ ಕೋರಲು ಬರ್ತಾರೆ?  ಜೆಡಿಎಸ್‌ ಜೊತೆ ಮಾತುಕತೆ ನಡೆಸುವ ನೈತಿಕತೆ ಅವರಿಗೆ ಇದೆಯೇ?  ಹಾಸನ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ತರಾಟೆಗೆ ತೆಗೆದುಕೊಂಡರು.

ದೇವೇಗೌಡರ ಕುಟುಂಬದವರು ಮಾತ್ರ ಕುಟುಂಬ ರಾಜಕಾರಣ ಮಾಡುತ್ತಿದ್ದಾರೇ ಎಂದು ಡಾ.ಸೂರಜ್‌ ರೇವಣ್ಣ ಅವರ ಸ್ಪರ್ಧೆಯ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿಯರ ಟೀಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ ರಾಜಕಾರಣದಲ್ಲಿರಲಿಲ್ಲವೇ ? ಈಗ ಸೋನಿಯಾ ಗಾಂಧಿ,  ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ರಾಜಕೀಯ ಮಾಡುತ್ತಿಲ್ಲವೇ?  ಬಿಜೆಪಿಯಲ್ಲಿ  ಯಡಿಯೂರಪ್ಪ ಮತ್ತು ಮಕ್ಕಳು ರಾಜಕೀಯದಲ್ಲಿವೇ ಎಂದು ಹರಿಹಾಯ್ದರು.

ಈಶ್ವರಪ್ಪ ಎಂದರೆ ಕಲೆಕ್ಷನ್‌ ಮಾಸ್ಟರ್‌. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವ ರೀತಿ ಆಡಳಿತ ನಡೆಯುತ್ತಿದೆ ಎಂಬುದು ಜನರಿಗೆ  ಗೊತ್ತಿದೆ.  ಎಂಎಲ್‌ಎಗಳು ಲಂಚ ಕೊಟ್ಟು ಕೆಲಸ ಮಾಡಿಸುವ  ಪರಿಸ್ಥಿತಿ ಬಂದಿದೆ.  ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರ ಇದೆ ಎಂಬುದು  ರಾಜ್ಯಪಾಲರು, ಪ್ರಧಾನಿಯವರ ಗಮನಕ್ಕೂ ಹೋಗಿದೆ.-ಎಚ್‌. ಡಿ. ರೇವಣ್ಣ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next