Advertisement

ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ

09:47 AM Jul 06, 2020 | Suhan S |

ವಿಜಯಪುರ: ಕೋವಿಡ್ ಹಿನ್ನೆಲೆಯಲ್ಲಿ ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆಯಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಶ್ರದ್ಧಾ-ಭಕ್ತಿ ಪೂರ್ವಕವಾಗಿ ರವಿವಾರ ಗುರುಪೂರ್ಣಿಮೆ ಆಚರಿಸಲಾಯಿತು.

Advertisement

ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ನೆರವೇರಿದವು. ಭಾನುವಾರ ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನವೇ ಗುರುಪೂರ್ಣಿಮೆ ಪೂಜೆ, ಗದ್ದುಗೆ ಬಳಿ ಜಪಯಜ್ಞಗಳು ಆರಂಭಗೊಂಡಿದ್ದವು. ಹಿಂದಿನಂತೆ ಗುರುಪೂರ್ಣಿಮೆ ದಿನ ಜ್ಞಾನಯೋಗಾಶ್ರಮದಲ್ಲಿ ಕಂಡುಬರುತ್ತಿದ್ದ ಭಕ್ತರ ದಂಡು ಇರಲಿಲ್ಲ. ಮನೆಯಲ್ಲಿಯೇ ಜಪ ಮಾಡಿ, ಮೊಬೆ„ಲ್‌ನಲ್ಲೇ ಗುರುಪೂರ್ಣಿಮೆಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಯೂ ಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡಲಾಯಿತು. ಇದರಿಂದಾಗಿ ಭಕ್ತರು ಮನೆಗಳಲ್ಲೇ ಕುಳಿತು ಆಧುನಿಕ ತಂತ್ರಜ್ಞಾನದ ನೆರವಿನಿಂದ ಗುರು ಪೂರ್ಣಿಮೆಯ ದೃಶ್ಯಾವಳಿಗಳನ್ನು ಭಕ್ತರು ಕಣ್ತುಂಬಿಕೊಂಡರು. ವೇದಾಂತ ಕೇಸರಿ ಶ್ರೀಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನದ ಧ್ವನಿ ಸುರುಳಿಯನ್ನೂ ಪ್ರಸಾರ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next