Advertisement

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

05:55 PM Jul 21, 2024 | Team Udayavani |

ನನ್ನ ಗುರುಗಳ ಬಗ್ಗೆ ಮಾತಾಡಲಿಕ್ಕೆ ನನಗ ಭಾಳ ಆನಂದ ಆಗ್ತದ. ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಗಾನಯೋಗಿ ಪುಟ್ಟರಾಜ ಗವಾಯಿಗಳು ಇಬ್ಬರೂ ಹುಟ್ಟು ಕುರುಡರು. ಅವರನ್ನ ಕರಕೊಂಡ ಬಂದು ಶಿವಯೋಗಿ ಮಂದಿರದೊಳಗ ಇಟ್ಕೊಂಡು ಸಂಗೀತ ಕಲಿಸಿದ್ದು ಹಾನಗಲ್‌ ಕುಮಾರಸ್ವಾಮಿ ಅವರು. ಅವರೆಂಥಾ ದಿವ್ಯಜ್ಞಾನಿ..!

Advertisement

ಗುರುಗಳು ಜ್ಞಾನಿಗಳಿರ್ತಾರ. ಆದರ, ಸಮಾಜಕ್ಕಾಗಿ ನಿಸ್ವಾರ್ಥ ಸೇವಾ ಮಾಡಿದವರು ಕಡಿಮಿ. ನಮ್ಮ ಗುರುಗಳು ಪುಟ್ಟರಾಜ ಗವಾಯಿಗಳು ತಮಗಾಗಿ ಏನನ್ನೂ ಬಯಸಲಿಲ್ಲ. ಇಂಥ ಗುರುಗಳು ಸಿಕ್ಕಿದ್ದು ಶಿಷ್ಯರಾದ ನಮ್ಮ ಭಾಗ್ಯ.

ತಿಂಗಳಾನುಗಟ್ಟಲೆ ಒಂದ ರಾಗ :

1967ರೊಳಗ ನಾನು ಗದಗಿನ ವೀರೇಶ್ವರ ಪುಣ್ಯಾಶ್ರಮ ಸೇರಿದೆ. 12 ವರ್ಷ ಅಲ್ಲಿ ಸಂಗೀತಾಭ್ಯಾಸ ಮಾಡಿದೆ. ನಾನು ಕಲಿತಿದ್ದು ಗುರುಕುಲ ಪದ್ಧತಿಯೊಳಗ. ಪ್ರತಿದಿನ ನಶಿಕ್ಲೆ ಏಳಬೇಕು. ಶುಭ್ರರಾಗಿ ಅಭ್ಯಾಸಕ್ಕ ಹೋಗಬೇಕು. ನಾವು ಹೋಗೋದ್ರಾಗ ಗುರುಗಳು ತಂಬೂರಿ ಹಿಡಿಕೊಂಡು ಕೂತಿರ್ತಿದ್ರು. ಪ್ರತಿದಿನ ಬೆಳಗ್ಗೆ 4ರಿಂದ 7 ಗಂಟೆ ತನ 3 ತಾಸು ಸಂಗೀತ, ವಾದ್ಯ ಅಭ್ಯಾಸ. ಒಂದ ರಾಗವನ್ನ 3-4 ತಿಂಗಳು ಕಲಸ್ತಿದ್ರು.  ಅದು ಪಕ್ಕಾ ಆಗೋತನ ಮುಂದ ಹೋಗ್ತಿರಲಿಲ್ಲ.

 ನಿನಗ ಈಗ ಸಂಗೀತ ತಿಳಿಲಿಕತ್ತದ :

Advertisement

ನನಗ ಭಾಳ ಸಲ ಭೂಪಾಲಿ, ಶುದ್ಧ ಕಲ್ಯಾಣಿ, ದೇಸಕರ್‌ ಈ ಮೂರು ರಾಗದೊಳಗ ಸ್ವರ ಹಚ್ಚೋದರ ಬಗ್ಗೆ ಭಾಳ ಗೊಂದಲ ಆಗ್ತಿತ್ತು. ಅದಕ್ಕ ಗುರುಗಳ ಕಡೆ ಹೋಗಿ “ಅಜ್ಜಾರ, ನನಗ ಭೂಪಾಲಿ ಹಾಡಲಿಕ್ಕೆ ಯಾಕೊ ವಿಶ್ವಾಸ ಬರಲ್ತು’ ಅಂತ ಅಂದೆ. “ಇಷ್ಟು ವರ್ಷ ಆತು, ಇನ್ನ ಭೂಪ್‌ ಬರಂಗಿಲ್ಲ..? ಈಗ ನಿನಗ ಸಂಗೀತ ತಿಳಿಲಿಕತ್ತದ. ಸಂಗೀತ ಅಂದ್ರ ಹಂಗ. ಅಭ್ಯಾಸ ಮಾಡ್ತಾ ಮಾಡ್ತಾ 60ನೇ ವರ್ಷಕ್ಕ ಸ್ವರ ಹಚ್ಚೋದು ಗೊತ್ತಾಗ್ತದ’ ಅಂತ ಹೇಳಿದ್ರು.

“ನ ಗುರೋರ್‌ ಅಧಿಕಂ’ ಅಂತ ಸಂಸ್ಕೃತದೊಳಗ ಒಂದು ಮಾತು ಅದ. ಇದರರ್ಥ “ಗುರುವಿನ ಮುಂದ ಜಗತ್ತಿನ್ಯಾಗ ಯಾವುದೂ ದೊಡ್ಡದಲ್ಲ’. ಅವರು ನಮಗೆ ಮುಖ್ಯವಾಗಿ ಕಲಿಸಿದ್ದು ಸಂಸ್ಕಾರ. “ಆಚಾರ ಕಲಿರಿ, ಅಂದ್ರ ವಿಚಾರ ಹೊಳಿತದ. ಸದಾ ಒಳ್ಳೆದು ಮಾಡ್ರಿ…’ ಇದನ್ನ ಒತ್ತಿ ಒತ್ತಿ ಹೇಳ್ತಿದ್ರು. ನನ್ನ ಗುರುಗಳಿಂದನ ಇವತ್ತು ನಾನು ಸ್ವಾವಲಂಬಿ ಜೀವನ ಮಾಡಲಿಕತ್ತೇನಿ. ನನ್ನ ತಾಯಿ ನನಗ ಜನ್ಮ ಕೊಟ್ಟಳು, ಗುರು ಪುನರ್ಜನ್ಮ ಕೊಟ್ಟರು. ನನಗ ಅವರ ದೇವರು

-ಪಂ. ಎಂ. ವೆಂಕಟೇಶ್‌ ಕುಮಾರ್‌, ಖ್ಯಾತ ಗಾಯಕರು

 

Advertisement

Udayavani is now on Telegram. Click here to join our channel and stay updated with the latest news.

Next