Advertisement

ಗುರು ದೀಕ್ಷೆ ಸುವರ್ಣ ಸಂಭ್ರಮ

11:10 AM Dec 10, 2017 | Team Udayavani |

ಮಂಗಳೂರು: ಕರ್ನಾಟಕ ಕೆಥೋಲಿಕ್‌ ಕ್ರೈಸ್ತ ಮಹಾ ಧರ್ಮಪ್ರಾಂತದ ಮಹಾ ಧರ್ಮಾಧ್ಯಕ್ಷರಾದ ಬೆಂಗಳೂರಿನ ಆರ್ಚ್‌ ಬಿಷಪ್‌ ರೈ| ರೆ| ಡಾ| ಬರ್ನಾರ್ಡ್‌ ಮೊರಾಸ್‌ ಅವರ ಗುರು ದೀಕ್ಷೆಯ ಸುವರ್ಣ ಮಹೋತ್ಸವದ ಅಂಗವಾಗಿ ರವಿವಾರ ಕುಪ್ಪೆಪದವು ದಿ ಇಮ್ಯಾಕ್ಯುಲೆಟ್‌ ಹಾರ್ಟ್‌ ಆಫ್‌ ಮೇರಿ ಚರ್ಚ್‌ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ಹಾಗೂ ಬಳಿಕ ಮೊರಾಸ್‌ ಕುಟುಂಬದ ಹಿರಿಯರ ಮನೆ ಆವರಣಲ್ಲಿ ಸಾರ್ವಜನಿಕ ಅಭಿನಂದನ ಸಮಾರಂಭ ನಡೆಯಲಿದೆ.

Advertisement

ಬೆಳಗ್ಗೆ 10 ಗಂಟೆಗೆ ನಡೆಯುವ ಬಲಿ ಪೂಜೆಯಲ್ಲಿ ರೈ| ರೆ| ಡಾ| ಬರ್ನಾರ್ಡ್‌ ಮೊರಾಸ್‌ ಅವರ ಜತೆಗೆ ಬಿಷಪರಾದ ರೈ| ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ (ಮಂಗಳೂರು), ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ (ಉಡುಪಿ), ರೈ| ರೆ| ಡಾ| ಹೆನ್ರಿ ಡಿ’ಸೋಜಾ (ಬಳ್ಳಾರಿ), ರೈ|  ರೆ| ಡಾ| ಲಾರೆನ್ಸ್‌ ಮುಕ್ಕುಯಿ (ಬೆಳ್ತಂಗಡಿ), ಮಾರ್‌ ದಿವಾನಿಯೋಸ್‌ ಮಕಾರಿಯೋಸ್‌ (ಪುತ್ತೂರು), ರೈ| ರೆ| ಡಾ| ಡೆರಿಕ್‌ ಫೆರ್ನಾಂಡಿಸ್‌ (ಕಾರವಾರ), ರೈ| ರೆ| ಡಾ| ಪೀಟರ್‌ ಮಚಾದೊ (ಬೆಳಗಾವಿ), ರೈ| ರೆ| ಡಾ| ಆ್ಯಂಟನಿ ಕಾರಿಯಲ್‌ (ಮಂಡ್ಯ) ಅವರು ಹಾಗೂ ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು, ಕುಪ್ಪೆಪದವು ಚರ್ಚ್‌ನ ಧರ್ಮಗುರು ಫಾ| ವಲೇರಿಯನ್‌ ಡಿ’ಸೋಜಾ ಸಹಿತ ಸುಮಾರು 25ರಷ್ಟು ಧರ್ಮಗುರುಗಳು ಉಪಸ್ಥಿತರಿರುವರು. 150ರಷ್ಟು ಧರ್ಮಭಗಿನಿಯರು, ಕುಪ್ಪೆ ಪದವು ಚರ್ಚ್‌ನ ಕ್ರೈಸ್ತರು, ಮಹಾ ಧರ್ಮಾಧ್ಯಕ್ಷರ ಅಭಿಮಾನಿಗಳು, ಮೊರಾಸ್‌ ಕುಟುಂಬದ ಹಿತೈಷಿಗಳು ಭಾಗವಹಿಸಲಿದ್ದಾರೆ. 

14 ವರ್ಷಗಳಿಂದ ಮಹಾ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು 2016ರಲ್ಲಿ ತಮ್ಮ ಬಾಳಿನ ಅಮೃತ ಮಹೋತ್ಸವವನ್ನು ಆಚರಿಸಿದ್ದು, ಇದೀಗ ಧರ್ಮಗುರು ದೀಕ್ಷೆಯ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. ಡಿ. 6ಕ್ಕೆ ಗುರು ದೀಕ್ಷೆ ಲಭಿಸಿ 50 ವರ್ಷಗಳಾಗಿದ್ದು, ಅವರ ಕೇಂದ್ರ ಕಚೇರಿ ಇರುವ ಬೆಂಗಳೂರಿನಲ್ಲಿ ಅಂದು ಈ ಸಂಭ್ರಮಾಚರಣೆ ನಡೆದಿದೆ. ಮಂಗಳೂರಿನ ಕುಪ್ಪೆಪದವು ಅವರ ಹುಟ್ಟೂರು. ಡಿ. 10ರಂದು ಹುಟ್ಟೂರಿನಲ್ಲಿ ಗುರು ದೀಕ್ಷೆಯ ಸುವರ್ಣ ಮಹೋತ್ಸವ ಸಮಾರಂಭ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next