Advertisement

ತೆಗೆಯಲಾಗುತ್ತಿಲ್ಲ ಗುರ್ಜಾಪುರ ಬ್ಯಾರೇಜ್ ಗೇಟ್ : ಆತಂಕದಲ್ಲಿ ಜನತೆ

02:41 PM Jul 16, 2022 | Team Udayavani |

ರಾಯಚೂರು: ತಾಲೂಕಿನ ಗುರ್ಜಾಪುರ ಬಳಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್ ನ 95 ಗೇಟ್ ಗಳು ಸ್ಥಗಿತಗೊಂಡಿವೆ. ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದಿಂದ 1.62 ಲಕ್ಷ ಕ್ಯೂಸೆಕ್ ನೀರು ಹರಿಸುತ್ತಿರುವ ಪರಿಣಾಮ, ಬ್ಯಾರೇಜ್ ಮೇಲೆ ಒತ್ತಡ ಬೀಳುತ್ತಿದೆ.

Advertisement

ಒಟ್ಟು 194 ಗೇಟ್ ಗಳಿದ್ದು, ಈಗ ಕೇವಲ 99 ಗೇಟ್ ಮಾತ್ರ ಓಪನ್ ಮಾಡಲಾಗಿದೆ. ಕೇರಳ ಮೂಲದ ಐದು ಜನ ತಜ್ಞರ ತಂಡ ಆಗಮಿಸಿದ್ದು, ಗೇಟ್ ಗಳನ್ನು ತೆರೆಯಲು ನಾನಾ ರೀತಿಯ ಪ್ರಯತ್ನ ಪಡುತ್ತಿದ್ದಾರೆ. ಎರಡು ಜೆಸಿಬಿಗಳನ್ನು ಬಳಸಿ ಕೆಲಸ ಮಾಡಿದರೂ ಒಂದೂ ಗೇಟ್ ತೆಗೆಯಲಾಗಿಲ್ಲ.

ಇದನ್ನೂ ಓದಿ:ಬದುಕು ಕಸಿದ ಮಳೆ: ಟಾರ್ಪಲ್ ಕಟ್ಟಿಕೊಂಡು ಬದುಕು ಸಾಗಿಸುತ್ತಿದೆ ಬಡ ಕುಟುಂಬ

ಆರ್ ಟಿಪಿಎಸ್, ವೈಟಿಪಿಎಸ್ ಗಾಗಿ ನೀರು ಶೇಖರಿಸಲು ಈ ಬ್ಯಾರೇಜ್ ನಿರ್ಮಿಸಲಾಗಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

Advertisement

ನದಿಗೆ ಹೆಚ್ಚು ಪ್ರಮಾಣದ ನೀರು ಹರಿಸುವ ನಿರೀಕ್ಷೆಯಿದ್ದು, ಇದರಿಂದ ಗುರ್ಜಾಪುರ, ಕಾಡ್ಲೂರು ಸೇರಿ ನದಿ ಪಾತ್ರದ ಊರುಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ನೀರು ಹೆಚ್ಚಾದರೆ ಬ್ರಿಜ್ ಕಂ ಬ್ಯಾರೇಜ್ ಮುಳುಗುವುದು ಸಾಮಾನ್ಯ. ಆದರೆ, ಅದಕ್ಕೂ ಮುನ್ನವೇ ಎಲ್ಲ ಗೇಟ್ ಗಳನ್ನು ತೆರೆಯಲಾಗುತ್ತಿತ್ತು. ಈಗ ಸಾಕಷ್ಟು ಗೇಟ್ ಗಳು ಮುಚ್ಚಿರುವ ಪರಿಣಾಮ ಬ್ಯಾರೇಜ್ ಮೇಲೆ ಒತ್ತಡ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಕಳೆದ ಕೆಲ ವರ್ಷಗಳ ಹಿಂದೆ ಗೂಗಲ್ ಬ್ಯಾರೇಜ್ ನಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತು ಕೊಳ್ಳದಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next