Advertisement

Vijayapura ಗುಮ್ಮಟನಗರಿಯಲ್ಲಿ ಗುಂಡಿನ ಸದ್ದು : ಒಬ್ಬನಿಗೆ ಗಾಯ

08:05 PM Nov 10, 2023 | Shreeram Nayak |

ವಿಜಯಪುರ : ವಿಜಯಪುರ ನಗರದಲ್ಲಿ ಶುಕ್ರವಾರ ಸಂಜೆ ಗುಂಡಿನ ಸದ್ದು ಕೇಳಿ ಬಂದಿದೆ. ಪಾಲಿಕೆಯ ಪತಿಯ ಹತ್ಯೆ ಪ್ರಕರಣದ ಪ್ರತಿಕಾರವಾಗಿ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದ್ದು, ಸುದೈವಶಾತ್ ಗುಂಡಿನ ಗುರಿ ತಪ್ಪಿ, ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

Advertisement

ನಗರದ ವಡ್ಡರ ಓಣಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಗುರಿ ತಪ್ಪಿದ ಕಾರಣ ಶೋಯೇಬ್ ಕಕ್ಕಳಮೇಲಿ ಎಂಬವನಿಗೆ ಗುಂಡು ಕಿವಿಗೆ ತಾಗಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಯೇಬ್ ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಕಂಟ್ರೀ ಪಿಸ್ತೂಲ್ ಬಳಸಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಮಾತ್ರ ಶೋಯೇಬ್ ಕಿವಿಗೆ ತಾಗಿ, ಗಾಯವಾಗಿದೆ. ದಾಳಿ ಮಾಡಿದ ಬಳಿಕ ಆರೋಪಿಗಳು ಬೈಕ್‍ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಗಿದ್ದಾರೆ.

ಘಟನೆಯ ಪ್ರತ್ಯಕ್ಷದರ್ಶಿ ಎನ್ನಲಾದ ಶೋಯೇಬ್‍ನ ಸ್ನೇಹಿತ ಅಮಾನುಲ್ಲಾ ಲೋಣಿ ಹೇಳುವಂತೆ ಸದರಿ ಗುಂಡಿನ ದಾಳಿಗೆ ಕಾರಣವಾದವರು ಮೇ 6 ರಂದು ಹತ್ಯೆಯಾಗಿರುವ ಹೈದರ್ ನದಾಫ್‍ನ ಸಹೋದರರು.

ಮೊಹ್ಮದ್ ನದಾಫ್, ಸಹಚರ ಚಾರ್ಲೇ ಸಮೀರ ಸೇರಿದಂತೆ ಇತರರು ಜೊತೆಗಿದ್ದರು. ಆರೋಪಿಗಳು ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುರಿ ತಪ್ಪಿದ್ದರೆ ಮತ್ತೊಂದು ಕಿವಿಗೆ ಗಾಯವಾಗಿದೆ ಎಂದು ಆರೋಪಿಸಿದ್ದಾನೆ.

Advertisement

ಮೇ 6 ರಂದು ನಗರದಲ್ಲಿ ಹತ್ಯೆಯಾಗಿದ್ದ ಹೈದರ್ ನದಾಫ್ ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ನದಾಫ್ ಪತಿ. ಸದರಿ ಘಟನೆಯಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಜಾಮೀನಿನ ಮೇಲೆ ನಾಲ್ವರು ಹೊರಹೆ ಬಂದಿದ್ದಾರೆ. ಹೀಗಾಗಿ ಹಯದರ್ ಹತ್ಯೆಯ ಪ್ರತೀಕಾರಕ್ಕಾಗಿ ಶೋಯೇಬ್ ಕಕ್ಕಳಮೇಲಿ ಮೇಲೆ ದುಷ್ಕರ್ಮಿಗಳು ಗುಂಡಿ ಹಾರಿಸಿದ್ದಾರೆ ಎಂದು ದೂರಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಲೇ ಎಸ್ಪಿ ಋಷಿಕೇಶ ಭಗವಾನ್ ಹಾಗೂ ಪೊಲೀಸ್ ಇತರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು, ಇಡೀ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಲಿದ್ದೇವೆ ಎಂದರು.

ಘಟನಾ ಸ್ಥಳದಲ್ಲಿ ಮೂರು ಬೈಕ್‍ಗಳು ಬಿದ್ದಿದ್ದು, ಒಂದು ಬಾಧಿತನಿಗೆ ಸೇರಿರಬಹುದು. ಈ ಕುರಿತು ಸಮಗ್ರ ತನಿಖೆ ನಡೆಸುವ ಜೊತೆಗೆ ತಲೆ ಮರೆಸಿಕೊಂಡಿರುವ ಆರೋಪಿಗಳ ಶೀಘ್ರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next