Advertisement

Gundlupete: ಕೌಟುಂಬಿಕ ಕಲಹ: ಮಹಿಳೆ ನೇಣಿಗೆ ಶರಣು; ಪತಿ ಬಂಧನ

06:36 PM Aug 27, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಆ.27ರ ಮಂಗಳವಾರ ನಡೆದಿದೆ.

Advertisement

ಕಬ್ಬಹಳ್ಳಿ ಗ್ರಾಮದ ಪ್ರೇಮ (32) ನೇಣಿಗೆ ಶರಣಾದ ಗೃಹಿಣಿ.

ಪ್ರೇಮ ಕೆಲ ವರ್ಷಗಳ ಹಿಂದೆ ಹೆಚ್.ಡಿ.ಕೋಟೆಯ ಪ್ರಸನ್ನ ಎಂಬವರೊಂದಿಗೆ   ಮದುವೆಯಾಗಿದ್ದರು. ಪತಿ ನೀಡುತ್ತಿದ್ದ ಕಿರುಕುಳದಿಂದ ಮನನೊಂದು ತವರು ಮನೆ ಕಬ್ಬಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿಂದತೆ ಮೃತಳ ಪತಿ ಪ್ರಸನ್ನ, ಅತ್ತೆ ಸಾವಿತ್ರಮ್ಮ ಅವರ ವಿರುದ್ಧ ಪ್ರೇಮಾ ಅವರ ಅಣ್ಣ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನನ್ವಯ ಬೇಗೂರು ಪೊಲೀಸರು ಪತಿ ಪ್ರಸನ್ನ ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next