Advertisement

ಸಮಾಧಿಯೊಳಗೆ ಪಾತ್ರೆ, ಭಕ್ಷ್ಯ, ವೈಢೂರ್ಯಗಳು!

11:56 PM Jan 08, 2023 | Team Udayavani |

ಅಹಮದಾಬಾದ್‌: ಗುಜರಾತ್‌ನಲ್ಲಿರುವ ಪ್ರಾಚೀನ ಹರಪ್ಪಾ ಕಾಲದ ಬೃಹತ್‌ ಸಮಾಧಿಗಳಲ್ಲಿ ನಡೆಸಿರುವ ಉತ್ಖನನವು ಹಲವು ಹೊಸ ಸಂಗತಿಗಳನ್ನು ಬಹಿರಂಗಪಡಿಸಿವೆ.

Advertisement

ಕ್ರಿ.ಪೂ. 5 ಸಾವಿರನೇ ವರ್ಷದ ಸಮಾಧಿಗಳು ಮಣ್ಣಿನ ದಿಬ್ಬದಿಂದ ಹಿಡಿದು ಕಲ್ಲಿನ ಸಮಾಧಿವರೆಗೆ ಹೇಗೆ ಪರಿವರ್ತನೆಯಾಗುತ್ತಾ ಸಾಗಿದವು ಎಂಬದರ ಮೇಲೂ ಈ ಉತ್ಖನನ ಬೆಳಕು ಚೆಲ್ಲಿದೆ. ಜತೆಗೆ, ಹಿಂದೆಲ್ಲ ಜನರನ್ನು ಸಮಾಧಿ ಮಾಡುವ ವೇಳೆ ಮರಣೋತ್ತರ ಬದುಕಿಗೆ ಅಗತ್ಯವಿರುವ ಸಾಮಗ್ರಿಗಳನ್ನೂ ಮೃತದೇಹದೊಂದಿಗೆ ಇಡುತ್ತಿದ್ದರು ಎಂಬುದನ್ನೂ ತೋರಿಸಿಕೊಟ್ಟಿದೆ.

ಗುಜರಾತ್‌ನ ಕಛ… ಜಿಲ್ಲೆಯ ಜುನಾ ಖಟಿಯಾ ಗ್ರಾಮದಲ್ಲಿ 2019ರಿಂದೀಚೆಗೆ ಉತ್ಖನನ ನಡೆಯುತ್ತಿದೆ. ಈ ಸ್ಥಳದಲ್ಲಿ ಸಿಕ್ಕಿರುವ ಮಣ್ಣಿನ ಮಡಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವು ಸಿಂಧ್‌ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಪ್ರಾಚೀನ ಹರಪ್ಪಾ ತಾಣಗಳಲ್ಲಿ ಸಿಕ್ಕಿರುವ ಮಡಿಕೆಗಳ ಮಾದರಿಯನ್ನೇ ಹೊಂದಿವೆ.

ಈ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕಲ್ಲುಗಳಾದ ಜೇಡಿಪದರಗಲ್ಲು ಮತ್ತು ಮರಳುಗಲ್ಲುಗಳಿಂದಲೇ ಆಯತಾಕಾರದ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಜೊತೆಗೆ, ಮಣ್ಣಿನ ಪಾತ್ರೆಗಳು, ಭಕ್ಷ್ಯಗಳು ಮಾತ್ರವಲ್ಲದೇ ಬೆಲೆಬಾಳುವ ಮಣಿಗಳು, ಟೆರಕೋಟಾದಿಂದ ಮಾಡಲಾದ ಬಳೆಗಳು, ಸಮುದ್ರಚಿಪ್ಪುಗಳು, ವೈಢೂರ್ಯಗಳನ್ನು ಇಡಲಾಗಿದೆ.

ಬಹುತೇಕ ಸಮಾಧಿ ಸ್ಥಳಗಳಲ್ಲಿ 5ರಿಂದ 6 ಮಡಿಕೆಗಳು ಸಿಕ್ಕಿವೆ. ಒಂದು ಸಮಾಧಿಯಲ್ಲಂತೂ 62 ಮಡಿಕೆಗಳನ್ನು ಇಡಲಾಗಿತ್ತು ಎಂದು ಕೇರಳ ವಿವಿದ ಪುರಾತತ್ವ ವಿಭಾಗದ ಸಹಾಯಕ ಪ್ರೊಫೆಸರ್‌ ರಾಜೇಶ್‌ ಎಸ್‌.ವಿ. ಹೇಳಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next