Advertisement

ಆಟೋ ಚಾಲಕನ ಮನೆಯಲ್ಲಿ ಕೇಜ್ರಿವಾಲ್‌ ಭೋಜನ

06:47 PM Sep 12, 2022 | Team Udayavani |

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ಆಟೋ ಚಾಲಕರ ಸಭೆ ನಡೆಸಿದರು. ಈ ವೇಳೆ ಆಟೋ ಚಾಲಕರೊಬ್ಬರು ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದರು.

Advertisement

“ನಾನು ನಿಮ್ಮ ದೊಡ್ಡ ಅಭಿಮಾನಿ. ಪಂಜಾಬ್‌ನಲ್ಲಿ ಅಟೋ ಚಾಲಕರೊಬ್ಬರ ಮನೆಯಲ್ಲಿ ನೀವು ಭೋಜನ ಸ್ವೀಕರಿಸುತ್ತಿರುವ ವಿಡಿಯೋ ನೋಡಿದೆ. ಭೋಜನೆಕ್ಕೆ ನಮ್ಮ ಮನೆಗೂ ನೀವು ಬರುವಿರಾ?,’ ಎಂದು ಕೇಳಿದರು.

ಇದಕ್ಕೆ ತಕ್ಷಣ ಸಮ್ಮತಿಸಿದ ಕೇಜ್ರಿವಾಲ್‌, “ನನ್ನ ಜತೆಗೆ ಪಕ್ಷದ ಇಬ್ಬರು ಸಹೋದ್ಯೋಗಿಗಳು ನಿಮ್ಮ ಮನೆಗೆ ಊಟಕ್ಕೆ ಬರುತ್ತೇವೆ. ರಾತ್ರಿ ಸರಿಯಾಗಿ 8 ಗಂಟೆಗೆ ಆಟೋ ತೆಗೆದುಕೊಂಡು ನಾವಿರುವ ಹೋಟೆಲ್‌ಗೆ ಬಂದು ನಮ್ಮನ್ನು ಕರೆದುಕೊಂಡು ಹೋಗುವಿರೇ,” ಎಂದು ಕೇಳಿದರು. ಅದಕ್ಕೆ ಚಾಲಕ ಒಪ್ಪಿದ್ದು, ಸೋಮವಾರ ರಾತ್ರಿ ಕೇಜ್ರಿವಾಲ್‌ ಆಟೋ ಚಾಲಕನ ಮನೆಯಲ್ಲೇ ಭೋಜನ ಸೇವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next