Advertisement

ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

03:02 PM Dec 10, 2021 | Team Udayavani |

ದೇವದುರ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುವ ಹಿನ್ನೆಲೆ ಕಾಯಂ, ಸೇವಾ ಭದ್ರತೆ ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ತರಗತಿಗಳು ಬಹಿಷ್ಕರಿಸಿ ಗುರುವಾರ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.

Advertisement

ಸುಮಾರ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುವುದರಿಂದ ಯಾವುದೇ ಸೌಲಭ್ಯ ಇಲ್ಲದಂತಾಗಿದೆ. ಕೇವಲ ಕನಿಷ್ಟ ಮಾಸಿಕ ಗೌರವ ಭತ್ಯೆ ಪಡೆದು ಪ್ರಮಾಣಿಕ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಕಾಯಂ, ಸೇವಾ ಭದ್ರತೆಯಲ್ಲಿ ಕಲ್ಪಿಸಬೇಕು. ಈ ಹಿಂದೆ ಸರ್ಕಾರಿ ಕಾಲೇಜಿಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ, ಸ್ಟಾಪ್‌, ಗ್ಯಾಪ್‌, ಗುತ್ತಿಗೆ ಆಧಾರಿತ ಅರೆಕಾಲಿಕ ಉಪನ್ಯಾಸಕರನ್ನು ಸರಕಾರ ಮಾನವೀಯತೆಯ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಪದನಾಮ ಹೊಂದಿರುವವರನ್ನು 1982, 1992, 2003ರಲ್ಲಿ ಕಾಯಂ ಮಾಡಿರುವ ನಿದರ್ಶಗಳಿವೆ.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆಗಳನ್ನು ಸೃಜಿಸಿ ಸೇರ್ಪಡೆ ಮತ್ತು ಕಾನೂನು ತಿದ್ದುಪಡಿ ಮಾಡಿಕೊಂಡು, ಅನುಮೋದನೆ ನೀಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವಿಲೀನಗೊಳಿಸಿ ಎಲ್ಲ ಅತಿಥಿ ಉಪನ್ಯಾಸಕರಿಗೂ ಅವರವರ ವಿದ್ಯಾರ್ಹತೆಗನುಸಾರ ಹುದ್ದೆಗಳನ್ನು ನೀಡಿ ಸೇವಾ ಭದ್ರತೆ ಜತೆ ಕಾಯಂ ಮಾಡಬೇಕು. ಕಡಿಮೆ ಪೋತ್ಸಾಹಧನದಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸರಕಾರ ಗಭೀರವಾಗಿ ಪರಿಗಣಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಾ| ಸುಮಮಂಗಳಾ, ನಲ್ಲಾರೆಡ್ಡಿ, ಶಿವರಾಜ ಎಚ್‌.ಡಿ. ಶಶಿಧರ ಅಕ್ಕರಕಿ, ನರಸಪ್ಪ, ಶೈಲಜಾ, ವೆಂಕಟೇಶ ರಾಠೊಡ್‌, ವೆಂಕಟೇಶ ಪವಾರ, ಹನುಮಂತ್ರಾಯ, ವೀಣಾ, ಕಮಲಾ ಸೇರಿದಂತೆ ಇತತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next