Advertisement

ಅರ್ಹ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ

03:20 PM Jan 03, 2022 | Team Udayavani |

ಶಿರಸಿ: ಮೂರು ವರ್ಷಗಳಕ್ಕಿಂತಲೂ ಹೆಚ್ಚು ಅನುಭವ ಹೊಂದಿದ ಅರ್ಹ ಉಪನ್ಯಾಸಕರನ್ನು ಖಾಯಂ ಗೊಳಿಸಿ ಎಂದು ನಗರದ ಮಾರಿಕಾಂಬಾ ಕಾಲೇಜ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಅರ್ಹರಲ್ಲದವರಿಗೂ ಕಾಲಾವಕಾಶ ನೀಡಿ ಖಾಯಂ ಮಾಡುವುದು. ( ಶಂಕರ್ ರಾವ್  ರವರು ಖಾಯಂ ಗೊಳಿಸಿದಂತೆ ಅಥವಾ ಜೆ.ಇ.ಒ ದಲ್ಲಿ ಮಾಡಿದಂತೆ) ಅಸಾಧ್ಯ ವಾದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನುಭವದಿಂದಲೇ ಪ್ರೌಢಿಮೆ ಹಾಗೂ ಶಿಕ್ಷಣದ ಮಟ್ಟ ಹೆಚ್ಚುವುದರಿಂದ ಅನುಭವವನ್ನು ಮುಖ್ಯವಾಗಿಸಿಕೊಂಡು ಪ್ರತೀ ವರ್ಷಕ್ಕೆ 5 ಅಂಕವನ್ನು ನೀಡಿ ಗರಿಷ್ಠ 15ವರ್ಷಗಳ ವರೆಗೆ ಅನುವು ಮಾಡಿಕೊಟ್ಟು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಕ್ಕೆ ಸಹಕರಿಸಬೇಕು. ಹೆಚ್ಚು ವಿದ್ಯಾರ್ಥಿಗಳು ಇರುವ ಮಾರಿಕಾಂಬಾ ಕಾಲೇಜ್ ನಲ್ಲಿ  ಕಾರ್ಯಭಾರವೂ ಹೆಚ್ಚಿರುತ್ತದೆ. ಆ ಕಾರಣಕ್ಕಾಗಿ ಬೇರೆ ಕಾಲೇಜಿಗೆ ಹೋಲಿಸದೇ ನಮ್ಮ ವೇತನವನ್ನು ಹೆಚ್ಚಿಸ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರುಗಳಾದ ಭವ್ಯಾ ಹಳೆಯೂರು ಸುಪ್ರೀಯಾ ಭಟ್, ದಿವ್ಯಾ ಶೇಟ್, ಆರತಿ ಭಟ್ಟ, ಕಾಂತಿ ಹೆಗಡೆ,  ಮುಕಾಂಬೆ ನಾಯ್ಕ್, ಭಾರತಿ ನಾಯ್ಕ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next