Advertisement

ಗುಡಿಬಂಡೆ: ಆಕಸ್ಮಿಕ ಬೆಂಕಿ ಅವಘಡ 2 ಗುಡಿಸಲುಗಳು ಭಸ್ಮ

07:28 PM Mar 02, 2023 | Team Udayavani |

ಗುಡಿಬಂಡೆ: ತಾಲೂಕಿನ ಕೊಂಡರೆಡ್ಡಿಹಳ್ಳಿ ಗ್ರಾಮದಲ್ಲಿ ಆದಿನಾರಾಯಣ, ನರಸಿಂಹಮೂರ್ತಿ ಎಂಬುವವರ ಮನೆಗಳಲ್ಲಿ ಆಕಸ್ಮಿಕವಾಗಿ ಎರಡು ಗುಡಿಸಲುಗಳು ಸಂಪೂರ್ಣವಾಗಿ ಭಸ್ಮವಾದ ಘಟನೆ ನಡೆದಿದೆ.

Advertisement

ಗುರುವಾರ ಸಂಜೆ 5.30ರ ಸುಮಾರಿನಲ್ಲಿ ಕೊಂಡರೆಡ್ಡಿಹಳ್ಳಿ ಗ್ರಾಮದ ಆದಿನಾರಾಯಣ, ನರಸಿಂಹಮೂರ್ತಿ ಎಂಬುವವರ ಎರಡು ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣವಾಗಿ ಭಸ್ಮವಾಗಿವೆ, ಎರಡು ಮನೆಗಳಲ್ಲಿದ್ದ ಬಟ್ಟೆ ಬರೆ, ದವಸ ದಾನ್ಯಗಳು, ದಾಖಲಾತಿಗಳು ಹಾಗೂ ನರಸಿಂಹಮೂರ್ತಿ ಸಾಲ ಮಾಡಿ ತಂದಿದ್ದ80 ಸಾವಿರ ನಗದು ಮೊತ್ತ ಸಹ ಸಂಪೂರ್ಣವಾಗಿ ಸುಟ್ಟು ಹೋಗಿದೆ, ಈ ಘಟನೆಯಲ್ಲಿ ಯಾರಿಗೂ ಸಹ ಪ್ರಾಣಾಪಾಯ ಸಂಭವಿಸಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next