Advertisement

Gudibande: ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಶಾಸಕರ ಫೋಟೋ

02:27 PM Mar 20, 2024 | Team Udayavani |

ಗುಡಿಬಂಡೆ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಮೇಲೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಫೋಟ್ ರಾರಾಜಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಗುಡಿಬಂಡೆ-ಗೌರೀಬಿದನೂರುಗೆ ಹೋಗುವ ಕರ್ನಾಟಕ ಸಾರಿಗೆ ಬಸ್ ಮೇಲೆ ಪ್ರದೀಪ್ ಈಶ್ವರ್ ಮಾಲೀಕತ್ವದ ಪರಿಶ್ರಮ ನೀಟ್ ಅಕಾಡೆಮಿಗೆ ಸಂಬಂಧಿಸಿದ ಜಾಹಿರಾತು ಇದೆ.

ಈಗಾಗಲೇ ದೇಶದೆಲ್ಲೆಡೆ ಲೋಕ ಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಾರಿಗೆ ಬಸ್‌ಗಳ ಮೇಲೆ ಶಾಸಕರ ಫೋಟೋ ರಾರಾಜಿಸುತ್ತಿದ್ದರೂ ಅದು ನೀತಿ ಸಂಹಿತೆಗೆ ಒಳಪಡುವುದಿಲ್ಲವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next