Advertisement

Gudibanda: ಕೈಕೊಟ್ಟ ಮಳೆ, ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

08:22 PM Nov 05, 2023 | Team Udayavani |

ಗುಡಿಬಂಡೆ: ತಾಲೂಕಿನ ಮರವೇನಹಳ್ಳಿ ಗ್ರಾಮದ ರೈತರೊಬ್ಬರು ಮಳೆ ಕೈಕೊಟ್ಟ ಕಾರಣ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಸುಧಾಕರ್ (45) ಆತ್ಮಹತ್ಯೆ ಮಾಡಿಕೊಂಡಿದ್ದು, ಕೋವಿಡ್ ಗಿಂತ ಮುಂಚೆ ಪಟ್ಟಣದ ಪಿ.ಸಿ.ಎ.ಆರ್.ಡಿ. ಬ್ಯಾಂಕಿನಲ್ಲಿ ಸಾಲ ಮಾಡಿ ಕೋಳಿ ಶೆಡ್ ನಿರ್ಮಾಣ ಮಾಡಿದ್ದು, ಕೋಳಿ ಸಾಕಾಣಿಕೆಯಲ್ಲೂ ಸಹ ನಷ್ಟ ಉಂಟಾಗಿದ್ದು, ಪುನಃ ಅಲ್ಲಿ, ಇಲ್ಲಿ ಖಾಸಗಿ ವ್ಯಕ್ತಿಗಳ ಬಳಿ, ಖಾಸಗಿ ಕಂಪನಿಗಳ ಬಳಿ ಸಾಲ ಮಾಡಿದ್ದರು.

ಬೆಳೆಯನ್ನು ಬೆಳೆದು ಮೇಲೆ ಬರಬೇಕೆಂದು ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದರು, ಆದರೆ ಇತ್ತೀಚಿಗೆ ಮಳೆ ಕೈ ಕೊಟ್ಟ ಕಾರಣ ಬೆಳೆಯಲ್ಲೂ ಸಹ ನಷ್ಟ ಉಂಟಾಗಿದ್ದು, ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಸುಧಾಕರ್ ಗೆ ಪತ್ನಿ, ಇಂಜನಿಯರಿಂಗ್ ಪದವಿ ಓದುತ್ತಿರುವ ಮಗ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಒಬ್ಬ ಮಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next