Advertisement
ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಕನ್ವೆನÒನ್ ಹಾಲ್ನಲ್ಲಿ ಬುಧವಾರ ಜೆಡಿಎಸ್ನ ಬೂತ್ಮಟ್ಟದ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಪಕ್ಷದ ರಾಜಾÂಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ, ಹುಣಸೂರಿನಿಂದ ಬಂದಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಜಿ.ಟಿ.ದೇವೇಗೌಡರ ಬೆಂಬಲಿಗರು ಅಡ್ಡಗಟ್ಟಿ, ಜಿ.ಟಿ.ದೇವೇಗೌಡ ಅಥವಾ ಅವರ ಮಗ ಜಿ.ಡಿ.ಹರೀಶ್ ಗೌಡರಿಗೆ ಹುಣಸೂರು ಕ್ಷೇತ್ರದಿಂದ ಪಕ್ಷದ ಟಿಕೆಟ್ ನೀಡುವಂತೆ ಆಗ್ರಹಿಸಿದರು.
Related Articles
ಈ ಮಧ್ಯೆ, ಪಕ್ಷದ ಇತ್ತೀಚಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಜಿ.ಟಿ.ದೇವೇಗೌಡ ಮತ್ತವರ ಕುಟುಂಬ ಎಚ್.ಡಿ.ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡಿದೆ. ಬುಧವಾರ ನಡೆದ ಸಭೆಗೆ ಅವರ ಕುಟುಂಬದಿಂದ ಯಾರೊಬ್ಬರೂ ಬಂದಿರಲಿಲ್ಲ. ಜತೆಗೆ, ಎಚ್.ಡಿ.ಕೋಟೆ ಶಾಸಕ ಎಸ್.ಚಿಕ್ಕಮಾದು ಅವರು ಗೈರಾಗಿದ್ದರು.
Advertisement
ಯಾವ ಕಾರ್ಯಕರ್ತನಿಗೂ ನಾನು ಕಪಾಳಮೋಕ್ಷ ಮಾಡಿಲ್ಲ. ಸಭೆ ಮುಗಿದ ನಂತರ ಹುಣಸೂರಿನಿಂದ ಬಂದಿದ್ದ ಜಿಪಂ, ತಾಪಂ ಸದಸ್ಯರು ಶುಭ ಕೋರಿ, ಜಿ.ಟಿ.ದೇವೇಗೌಡರಿಗೆ ಟಿಕೆಟ್ ನೀಡಿ ಎಂದು ಏರಿದ ಧ್ವನಿಯಲ್ಲಿ ಕೂಗಾಡಿದರು. ಕೆಲವರು ಕಾಲಿಗೂ ಬಿದ್ದರು. ಈ ವೇಳೆ, ಕೊಠಡಿಯೊಳಗೆ ಕುಳಿತು ಮಾತನಾಡೋಣ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದೆ. ವಿನಾ ಕಪಾಳಮೋಕ್ಷ ಮಾಡಲಿಲ್ಲ.– ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡರ ಕುಟುಂಬದ ಒಬ್ಬರಿಗೆ ಹುಣಸೂರಿನಿಂದ ಟಿಕೆಟ್ ಘೋಷಣೆ ಮಾಡಿ ಎಂದು ಪಟ್ಟು ಹಿಡಿದಾಗ ಅವರ ಎಂದಿನ ಶೈಲಿಯಲ್ಲಿ “ಹೇಳು ಬ್ರದರ್’ ಎನ್ನುತ್ತಾ ಪ್ರೀತಿಯಿಂದ ಮಾತನಾಡಿಸಲು ಕೆನ್ನೆ ಸವರಿದರು. ಕಪಾಳಮೋಕ್ಷ ಮಾಡಲಿಲ್ಲ. ಚುನಾವಣೆ ವಿಷಯದಲ್ಲಿ ಜಿ.ಟಿ.ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.
– ಪ್ರೇಮಕುಮಾರ್ ಎಚ್. ಹುಣಸೂರು ತಾಪಂ ಉಪಾಧ್ಯಕ್ಷ.