Advertisement

ಸಿದ್ದರಾಮಯ್ಯ ಕಾಂಗ್ರೆಸನ್ನು ಬೆತ್ತಲೆ ಮಾಡುತ್ತಿರುವ ದುಶ್ಯಾಸನ:ಜಿಟಿಡಿ

04:54 PM Apr 08, 2018 | |

ಮೈಸೂರು: ಚಾಮುಂಡೇಶ್ವರಿ  ರಣ ಕಣ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದ್ದು ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಶ್ಯಾಸನನಿಗೆ ಹೋಲಿಕೆ ಮಾಡಿದ್ದಾರೆ. 

Advertisement

ಜೆಡಿಎಸ್‌ ಮತ್ತುಬಿಎಸ್‌ಪಿ  ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ ಜಿಟಿಡಿ ಅವರು ‘ಪಾಂಡವರು ದ್ರೌಪದಿಯ ಸೀರೆ ಸೇಳೆಯುವ ವೇಳೆ ಸುಮ್ಮನೆ ಕೂತಿದ್ದರು. ಅದೇ ರೀತಿ ಕಾಂಗ್ರೆಸನ್ನು ಸಿದ್ದರಾಮಯ್ಯ ಬೆತ್ತಲೆ ಮಾಡುತ್ತಿದ್ದು ಖರ್ಗೆ, ಪರೇಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರು ತಲೆ ಮೇಲೆ ಸೀರೆ ಹೊದ್ದು ಕೂತಿದ್ದಾರೆ’ ಎಂದರು. 

‘ಸಿದ್ದರಾಮಯ್ಯ ವಿರುದ್ದ ತೊಡೆ ತಟ್ಟಿದ ಶ್ರೀನಿವಾಸ್‌ ಪ್ರಸಾದ್‌ ಅವರೇ ಗಂಡಸು’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next