Advertisement

ಜಿ.ಎಸ್‌.ಬಿ. ಮಹಿಳಾ ಮಂಡಳಿ ಉಡುಪಿ : ಸಂಕ್ರಾಂತಿ ಹಬ್ಬ

12:50 AM Jan 18, 2019 | Team Udayavani |

ಉಡುಪಿ:  ಜಿ.ಎಸ್‌.ಬಿ.ಮಹಿಳಾ ಮಂಡಳಿ ಉಡುಪಿ ವತಿಯಿಂದ ಜ.14ರಂದು ಸಂಜೆ ಕಲಾಮಂದಿರದಲ್ಲಿ ಸಂಕ್ರಾಂತಿ ಕಾರ್ಯಕ್ರಮವು ಜರಗಿತು.

Advertisement

ಮಂಡಳಿಯ ಹಿರಿಯರಾದ ಸುಜಾತಾ ಪೈ, ನಯನಾ ಶೆಣೈ, ಸುಮತಿ ಪೈ, ಓಟಗಾರ್ತಿ ಸುಲತಾ ಕಾಮತ್‌ ಹಾಗೂ ಮುಖ್ಯ ಅತಿಥಿ ವಂದನಾ ಶೆಣೈ ಅವರನ್ನು ಸಮ್ಮಾನಿಸಲಾಯಿತು. 

ಮಾರ್ಚ್‌ 2018ರ ಕರ್ನಾಟಕ ಸರಕಾರದ 10ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ  ಉತ್ತೀರ್ಣರಾದ ಮೇಧಾ ಭಟ್‌ , ಮನೋಜ ಮಲ್ಯ,  ರಂಜಿತಾ ಪೈ,  ಜಾಗೃತಿ ನಾಯಕ್‌ ಅವರಿಗೆ ಸ್ಕಾಲರ್‌ ಶಿಫ್ ನೀಡಿ  ಸಮ್ಮಾನಿಸಲಾಯಿತು. ಉಪಸ್ಥಿತರಿದ್ದ  ಎಲ್ಲ  ಸುಮಂಗಲಿಯರನ್ನು ಸಮ್ಮಾನಿಸಲಾಯಿತು.  

ಮಂಡಳಿಯ ಅಧ್ಯಕ್ಷೆ ವೀಣಾ ಶೆಣೈ ಸ್ವಾಗತಿಸಿದರು. ಸುಧಾ ನಾಯಕ್‌ ಹಾಗೂ ಶಾರದಾ ರಾವ್‌ ಸಮ್ಮಾನಿತರನ್ನು ಪರಿಚಯಿಸಿದರು.  ಖಜಾಂಚಿ ಅನುಸೂಯಾ ಕಾಮತ್‌ ಸಮ್ಮಾನದ ವ್ಯವಸ್ಥೆಯನ್ನು ನಡೆಸಿದರು.  ಗೌರವಾಧ್ಯಕ್ಷ ಪ್ರಭಾ ಕಿಣಿ ವಂದಿಸಿದರು. ಕಾರ್ಯದರ್ಶಿ ಅಂಜನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next