Advertisement

ಮದುವೆಯಲ್ಲಿ ಬಾಂಡ್‌ ಪೇಪರ್‌ಗೆ ಸಹಿ ಹಾಕಲು ಹೇಳಿದ ವರನ ಸ್ನೇಹಿತರು!: ಸುದ್ದಿ ವೈರಲ್…

02:56 PM Sep 11, 2022 | Team Udayavani |

ಚೈನ್ನೈ: ಭಾರತದಲ್ಲಿ ಮದುವೆ ಸೀಸನ್ ಬಂತೆಂದರೆ ಸಮಾರಂಭದ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ನಗು ತಂದರೆ, ಕೆಲವು ಜನರ ಹೃದಯವನ್ನು ಮುಟ್ಟುತ್ತವೆ. ಇತ್ತೀಚೆಗೆ, ಚೆನ್ನೈನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರ ಮತ್ತು ಅವರ ಸ್ನೇಹಿತರ ಕೆಲಸ ನೆಟ್ಟಿಗರ ಗಮನ ಸೆಳೆದಿವೆ.

Advertisement

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಭೀಕರ ಅಪಘಾತ : ಕಂಬಕ್ಕೆ ಕಾರು ಢಿಕ್ಕಿ ಹೊಡೆದು 5 ಮಂದಿ ಸಾವು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಹೆಚ್ಚಿನ ಪುರುಷರಿಗೆ ಜೀವನದಲ್ಲಿ ಮೋಜು ಕ್ರಮೇಣ ಮರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದಕ್ಕಾಗಿ ವರನ ಸ್ನೇಹಿತರು ವಧುವಿಗೆ ಮದುವೆಯ ನಂತರವೂ ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಒಪ್ಪಂದ ಮಾಡಿಕೊಂಡ ಸ್ವಾರಸ್ಯಕರ ಘಟನೆ ಮಧುರೈನಲ್ಲಿ ನಡೆದಿದೆ.

ಮಧುರೈ ಜಿಲ್ಲೆಯ ಉಸಿಲಂಪಟ್ಟಿಯ ಕೀಲಾ ಪುದೂರು ನಿವಾಸಿ ಹರಿ ಪ್ರಸಾದ್ ಅವರು ಥೇಣಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಕ್ರಿಕೆಟ್ ಆಟಗಾರರಾಗಿದ್ದಾರೆ. ಅವರು ಸ್ಥಳೀಯ ಕ್ಲಬ್ ‘ಸೂಪರ್ ಸ್ಟಾರ್ ಕ್ರಿಕೆಟ್ ತಂಡ’ದ ನಾಯಕರಾಗಿದ್ದಾರೆ. ಇತ್ತೀಚೆಗೆ  ಹರಿಪ್ರಸಾದ್ (ಸೆ. 9) ತೇಣಿ ನಿವಾಸಿ ಪೂಜಾ ಎಂಬಾಕೆಯನ್ನು  ವಿವಾಹವಾಗಿದ್ದಾರೆ. ವಿವಾಹ ಸಂಭ್ರಮದಲ್ಲಿ ವರನ ಸ್ನೇಹಿತರು ಬಾಂಡ್ ಪೇಪರ್ ನೊಂದಿಗೆ ಬಂದು ವಧುವಿಗೆ ಶಾಕ್‌ ನೀಡಿದ್ದಾರೆ.

ಮದುವೆಯ ನಂತರವೂ ಹರಿ ಪ್ರಸಾದ್ ಗೆ ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಪೂಜಾಗೆ ಮನವಿ ಮಾಡಿದ್ದಾರೆ. ಮದುವೆಯ ನಂತರವೂ ಶನಿವಾರ ಮತ್ತು ಭಾನುವಾರದಂದು ವರನಿಗೆ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ಪೂಜಾ ಸಹಿ ಹಾಕಿದರು. ಈ ಘಟನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next