Advertisement

ಶ್ರೀಕುರು ಅಂಬಾ ರಾಜರಾಜೇಶ್ವರೀ ಸಭಾಭವನ ನಿರ್ಮಾಣಕ್ಕೆ ಚಾಲನೆ

12:11 PM Apr 08, 2022 | Team Udayavani |

ಕೋಡಿಕಲ್‌: ಇಲ್ಲಿನ ಕಲ್ಬಾವಿಯಲ್ಲಿರುವ ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರೀ ದೇವಸ್ಥಾನದ ಬಳಿ ಭಕ್ತರಿಗೆ ಅನ್ನದಾನಕ್ಕಾಗಿ ಅನ್ನಛತ್ರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಕಟ್ಟಡದ ನೆಲ, ಅನ್ನಛತ್ರದ ಒಂದು ಹಂತದ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.

Advertisement

29 ಸಾವಿರ ಚದರ ಅಡಿ ವಿಸ್ತೀರ್ಣದ ಈ ಯೋಜನೆಯಲ್ಲಿ ನೆಲ ಸಹಿತ ಒಟ್ಟು ಮೂರು ಅಂತಸ್ತಿನ ಯೋಜನೆ ಇದಾಗಿದೆ. 8,200 ಚದರ ಅಡಿಯ ನೆಲ ಮಹಡಿಯಲ್ಲಿ ವಿಶಾಲ ಪಾರ್ಕಿಂಗ್‌, 8925 ಚದರ ಅಡಿ ವಿಸ್ತೀರ್ಣದ ಪ್ರಥಮ ಮಹಡಿಯಲ್ಲಿ ಅನ್ನಛತ್ರ, 8,800 ಚದರ ಅಡಿ ವಿಸ್ತೀರ್ಣದ ದ್ವಿತೀಯ ಮಹಡಿಯಲ್ಲಿ ಸಭಾಂಗಣ, ಮೂರನೇ ಮಹಡಿಯಲ್ಲಿ ಬಾಲ್ಕನಿ ನಿರ್ಮಾಣವಾಗಲಿದೆ. 2014ರಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ, ನೆಲ, ಪ್ರಥಮ ಅಂತಸ್ತಿನ ಕಟ್ಟಡ ರಚನೆ ಪೂರ್ಣಗೊಂಡಿತ್ತು. ಕಾರಣಾಂತರಗಳಿಂದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ. ಅನ್ನಛತ್ರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಮಹಾದಾನವಾಗಿ ಎರಡು ಲಕ್ಷಕ್ಕಿಂತ ಅಧಿಕ ಮೊತ್ತ ದೇಣಿಗೆ ನೀಡಿದವರ ಭಾವಚಿತ್ರವನ್ನು ಹಾಕಲಾಗುವುದು. ಉಳಿದ ದಾನಿಗಳ ಹೆಸರು, ಮೊತ್ತವನ್ನು ಅಮೃತಶಿಲೆಯಲ್ಲಿ ಕೆತ್ತಲಾಗುವುದು.

ದೇವಾಲಯದ ವಿಶೇಷತೆ

1965ರಲ್ಲಿ ಕ್ಷೇತ್ರ ಗುದ್ದಲಿ ಪೂಜೆಯನ್ನು ಮಾಡಿ ನಿರ್ಮಾಣ ಮಾಡುವ ವೇಳೆ ಮೂರು ಅಡಿ ಆಳದಲ್ಲೇ ತೀರ್ಥ ಸಂಗ್ರಹಿಸುವ ಕಲ್ಲಿನ ಗೋಕರ್ಣವು ಪತ್ತೆಯಾಗಿತ್ತು. ಬಳಿಕ ಭಕ್ತರ ಸಹಕಾರದಿಂದ ಅಭೂತಪೂರ್ವ ದೇವಾಲಯ ನಿರ್ಮಾಣಗೊಂಡಿತು. 2004ರಲ್ಲಿ ಹಾಗೂ 2017ರಲ್ಲಿ ಬ್ರಹ್ಮಕಲಶೋತ್ಸವ ಆಗಿದೆ. ಈ ಕೇತ್ರದಲ್ಲಿ ವರ್ಷಾವಧಿ ಜಾತ್ರೆ, ವಿಶೇಷ ದಿನಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮೇಷ ಸಂಕ್ರಮಣದಿಂದ ಆರಂಭಗೊಂಡು ಮೂರು ದಿನಗಳ ವಾರ್ಷಿಕ ಜಾತ್ರೆ ನಡೆಯಲಿದ್ದು, ಈ ಕ್ಷೇತ್ರದಲ್ಲಿ ರಾಜರಾಜೇಶ್ವರೀ, ಸುಬ್ರಹ್ಮಣ್ಯನ ಪ್ರಧಾನ ಆರಾಧನೆ ಮಾಡಲಾಗುತ್ತದೆ.

ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಂದು ರಾತ್ರಿ ಶ್ರೀಚಕ್ರಪೂಜೆ, ಸಂಕಷ್ಟಹರ ಚತುರ್ಥಿಯಂದು ಸಂಕಷ್ಟಹರ ಪೂಜೆ, ಶುದ್ಧ ಪಂಚಮಿಯಂದು ನಾಗದೇವರಿಗೆ ತಂಬಿಲ ಸೇವೆ, ಶುದ್ಧ ಚೌತಿಯಂದು ಗಣಪತಿ ಹೋಮ, ಸಂಕ್ರಮಣದಂದು ರಾತ್ರಿ ರಕ್ತೇಶ್ವರೀ, ಚಾಮುಂಡಿ ಗುಳಿಗನಿಗೆ ಪರ್ವ ಸೇವೆ ನಡೆದುಕೊಂಡು ಬರುತ್ತಿದೆ.

Advertisement

ಸಾರ್ವಜನಿಕರ ಸಹಕಾರ ಮುಖ್ಯ

ದೇವಾಲಯದ ನಿರ್ಮಾಣದ ವೇಳೆ ದೇಗುಲಕ್ಕೆ ಸಂಬಂಧಪಟ್ಟ ವಸ್ತುಗಳು ದೊರೆತಿದ್ದವು. ಪ್ರಾಕೃತಿಕ ಏರುಪೇರುಗಳಿಂದ ದೇವರ ಗುಡಿ ನಾಶವಾಗಿರಬಹುದು. ತದನಂತರ ವಾಸುದೇವ ರಾಯರು ದೇವಾಲಯ ಸ್ಥಾಪಿಸಿದರೂ ಭಕ್ತರ ನೆರವಿನಿಂದ ದೇವತಾ ಪ್ರತಿಷ್ಠಾಪನೆ, ಪೂಜೆ ಪುನಸ್ಕಾರ, ಬ್ರಹ್ಮಕಲಶೋತ್ಸವ ನಡೆದಿರುತ್ತದೆ. ಇದೀಗ ಮಹತ್ವಾಕಾಂಕ್ಷೆಯ ಸಭಾಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು.

ನದೆಳ್ಳ ಸಾಂಬಶಿವರಾವ್‌, , ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರೀ ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next