Advertisement

ಓದಲು ಹೇಳಿದ್ದಕ್ಕೆ ತಾಯಿ ತಂಗಿಯನ್ನೇ ಕೊಂದ

07:30 AM Dec 10, 2017 | Team Udayavani |

ನೋಯ್ಡಾ: ಅಭ್ಯಾಸದಲ್ಲಿ ಹಿಂದಿರುವುದರಿಂದ ತಾಯಿ ಹಾಗೂ ತಂಗಿ ಬೈದರು ಎಂಬ ಕಾರಣಕ್ಕೆ ಪಿಜ್ಜಾ ಕಟರ್‌ನಿಂದ ಅವರನ್ನು ಹತ್ಯೆಗೈದಿದ್ದ 16 ವರ್ಷದ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತನ್ನ ಕುಕೃತ್ಯವನ್ನು ಬಾಲಕ ಒಪ್ಪಿಕೊಂಡಿದ್ದಾನೆ. ನವದೆಹಲಿಯ ಫ್ಲ್ಯಾಟ್‌ನಲ್ಲಿ ಕೊಲೆ ನಡೆಸಿದ ನಂತರ ಆತ ವಾರಾಣಸಿಗೆ ತೆರಳಿದ್ದ.

Advertisement

ವಾರಾಣಸಿಯಿಂದ ತಂದೆಗೆ ಕರೆ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ. ತಾಯಿ ಹಾಗೂ ತಂಗಿಯ ಮೇಲೆ ಮೊದಲು ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದು, ನಂತರ ಕತ್ತರಿ ಹಾಗೂ ಪಿಜ್ಜಾ ಕಟರ್‌ ಬಳಸಿ ಹತ್ಯೆಗೈದಿದ್ದಾನೆ. ಹತ್ಯೆ ನಡೆಸಿದ ನಂತರ 2 ಲಕ್ಷ ರೂ. ತೆಗೆದುಕೊಂಡು ತೊರೆದಿದ್ದ. ಈತ ಗ್ಯಾಂಗ್‌ಸ್ಟರ್‌ ಇನ್‌ ಹೈಸ್ಕೂಲ್‌ ಎಂಬ ವೀಡಿಯೋ ಗೇಮ್‌ ಗೀಳು ಹತ್ತಿಸಿಕೊಂಡಿದ್ದು, ಇದು ಕೊಲೆ ಮಾಡಲು ಪ್ರೇರೇಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಸಿಸಿಟಿವಿ ದೃಶ್ಯಾವಳಿಯಲ್ಲಿ ತಾಯಿ ತಂಗಿಯೊಂದಿಗೆ  ಫ್ಲ್ಯಾಟ್‌ಗೆ ತೆರಳಿದ್ದು, ಒಂಟಿಯಾಗಿ ರಾತ್ರೆ11.30ಕ್ಕೆ ಹೊರಗೆ ಬಂದಿದ್ದ. ಈತನ ರಕ್ತಸಿಕ್ತ ಬಟ್ಟೆ ಫ್ಲ್ಯಾಟ್‌ನಲ್ಲಿ ಸಿಕ್ಕಿತ್ತು. ಈತನೇ ಕೊಲೆ ಮಾಡಿರುವ ಶಂಕೆ ಮೂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next