Advertisement

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಕುರಿತಾದ ವಿಶೇಷ ಸಂಚಿಕೆ

09:16 PM Jul 17, 2022 | Team Udayavani |

ನವದೆಹಲಿ: ರಾಷ್ಟ್ರೀಯ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವು ತನ್ನ ಮಾಸಿಕ ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರಿಗೆ ಸಮರ್ಪಿತವಾಗಿ ವಿಶೇಷ ಸಂಚಿಕೆ ತಂದಿದೆ.

Advertisement

ಜೂನ್‌ ತಿಂಗಳ ಪತ್ರಿಕೆಯನ್ನು ಸಾವರ್ಕರ್‌ ವಿಶೇಷವಾಗಿಸಲಾಗಿದೆ. ಪತ್ರಿಕೆಯನ್ನು ಸಂಸ್ಕೃತಿ ಸಚಿವಾಲಯದ ಗಾಂಧಿ ಸ್ಮತಿ ಮತ್ತು ದರ್ಶನ ಸಮಿತಿಯು ಹೊರತಂದಿದೆ.

ಈ ಸಮಿತಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷರಾಗಿದ್ದಾರೆ. ಸಂಚಿಕೆಯಲ್ಲಿ ಹಿಂದುತ್ವದ ನಾಯಕ ವೀರ ಸಾವರ್ಕರ್‌ ಅವರನ್ನು ಅದ್ಭುತ ದೇಶಭಕ್ತ ಎಂದು ವರ್ಣಿಸಲಾಗಿದ್ದು, ಅವರು ಗಾಂಧಿ ಅವರಿಗಿಂತ ಕಡಿಮೆ ಸಾಮರ್ಥ್ಯದವರಲ್ಲ ಎಂದು ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next