Advertisement

ಜಿಪಿಬಿಎಲ್‌: ಹರಾಜಿನಲ್ಲಿ ಆಯ್ಕೆಯಾಗದವರಿಗೂ ಹಣ

11:03 PM Mar 30, 2023 | Team Udayavani |

ಬೆಂಗಳೂರು: ಈ ವರ್ಷ ಆಗಸ್ಟ್‌ನಲ್ಲಿ ನಡೆಯಲಿರುವ ಜಿಪಿಬಿಎಲ್‌ (ಬ್ಯಾಡ್ಮಿಂಟನ್‌ ಕೂಟ) ಹರಾಜಿನಲ್ಲಿ ಕೆಲ ವಿಶೇಷಗಳಿವೆ. ರಾಜ್ಯ ಮಟ್ಟದಲ್ಲಿ ನಡೆದಿದ್ದ ಮೊದಲ ಆವೃತ್ತಿ, ಈ ಬಾರಿ ರಾಷ್ಟ್ರೀಯಮಟ್ಟಕ್ಕೆ ವಿಸ್ತರಣೆಯಾಗಲಿದೆ. ಇನ್ನೊಂದು ಮಹತ್ವದ ಸಂಗತಿಯಿದೆ. ಹರಾಜಿನಲ್ಲಿ ಆಯ್ಕೆಯಾಗದ ಆಟಗಾರರಿಗೂ ಕನಿಷ್ಠ ಖಾತ್ರಿ ಮೊತ್ತವಾಗಿ 25,000 ರೂ.ಗಳನ್ನು ನೀಡಲಾಗುತ್ತದೆ. ಯುವ ಆಟಗಾರರು, ಅವರ ಶ್ರಮವನ್ನು ಪ್ರೋತ್ಸಾಹಿಸುವ ಸಲುವಾಗಿ ಜಿಪಿಬಿಎಲ್‌ನ ಸಂಘಟನಾ ಸಂಸ್ಥೆ ಬಿಟ್‌ನ್ಪೋರ್ಟ್‌ ಈ ಕ್ರಮ ತೆಗೆದುಕೊಂಡಿದೆ.

Advertisement

ಆಗಸ್ಟ್‌ ತಿಂಗಳಲ್ಲಿ ನಡೆಯುವ ಹರಾಜಿನಲ್ಲಿ ಒಟ್ಟು 150 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 30 ವಿದೇಶಿ ಆಟಗಾರರಿರಲಿದ್ದಾರೆ. ಕೆಲವು ಆಟಗಾರರು ಸಹಜವಾಗಿಯೇ ಹರಾಜಿನಲ್ಲಿ ಆಯ್ಕೆಯಾಗುವುದಿಲ್ಲ. ಅಂತಹವರನ್ನೂ ಪ್ರೋತ್ಸಾಹಿಸಲು ಜಿಪಿಬಿಎಲ್‌ ಸಿಇಒ ಪ್ರಶಾಂತ್‌ ರೆಡ್ಡಿ ಈ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಶಾಂತ್‌, ಜಿಪಿಬಿಎಲ್‌ ರಾಷ್ಟ್ರೀಯ ಮಟ್ಟಕ್ಕೆ ಏರುತ್ತಿರುವುದರಿಂದ ಬಹಳ ಆನಂದವಾಗಿದೆ. ಹಾಗೆಯೇ ಆಟಗಾರರಿಗೂ ಪ್ರೋತ್ಸಾಹಧನ ನೀಡುತ್ತಿರುವ ಬಗ್ಗೆ ಖುಷಿಯಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next