Advertisement

ಸೇನಾ ಸಲಕರಣೆ ಪೂರೈಕೆಯಲ್ಲಿ ಸ್ವಾವಲಂಬನೆ ಅಗತ್ಯ: ರಕ್ಷಣ ಸಚಿವ ರಾಜನಾಥ್‌ ಸಿಂಗ್‌

12:31 AM Sep 13, 2022 | Team Udayavani |

ಹೊಸದಿಲ್ಲಿ: ಮುಂದಿನ ದಿನಗಳಿಗೆ ಅಗತ್ಯವಾಗಿರು ವಂತೆ ದೇಶದ ರಕ್ಷಣ ಕ್ಷೇತ್ರವನ್ನು ಸ್ವಾವಲಂಬಿ ಯಾಗಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಅದಕ್ಕೆ ಬೇಕಾಗಿರುವ ಅತ್ಯುತ್ಕೃಷ್ಟ ರಕ್ಷಣ ಸಲಕರಣೆಗಳನ್ನು ದೇಶೀಯವಾಗಿಯೇ ಹೊಂದಲಾಗುವುದು ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸೇನಾ ಸಲಕರಣೆಗಳ ಸಾಗಣೆಗೆ ಸಂಬಂಧಿಸಿದ ಕಾರ್ಯ ಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.

ದೇಶದ ಸೇನೆಯ ಮೂರು ವಿಭಾಗಗಳಿಗೆ ಅನ್ವಯ ವಾಗುವಂತೆ ಏಕೀಕೃತ ಸೇನಾ ಸಲಕರಣೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬೇಕಾಗಿರುವ ವ್ಯವಸ್ಥೆಗಳನ್ನು ಹೊಂದಲು ಕೇಂದ್ರ ಸರಕಾರ ಉದ್ದೇಶಿಸಿದೆ. ಇಂಥ ಕೇಂದ್ರಗಳ ಮೂಲಕ ಸೇನೆಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಹೊಂದುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಎಲ್ಲ ವಿಭಾಗಗಳು ಕೂಡ ತಮ್ಮದೇ ಆಗಿರುವ ಮಾಹಿತಿ ಮತ್ತು ಸಂಪರ್ಕ ವ್ಯವಸ್ಥೆ ತಂತ್ರಜ್ಞಾನ (ಐಸಿಟಿ) ವ್ಯವಸ್ಥೆಯನ್ನು ಹೊಂದಿವೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಅತ್ಯುತ್ತಮ ರೀತಿಯಲ್ಲಿ ಸೇನಾ ಸಲಕರಣೆಗಳ ಪೂರೈಕೆಯ ನಿಟ್ಟಿನಲ್ಲಿ ಸಾಮಾನ್ಯ ಆಡಳಿತ ಮತ್ತು ಮಿಲಿಟರಿ ವ್ಯವಸ್ಥೆ ಜತೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next