Advertisement

Supreme Court: ಚುನಾಯಿತ ಪ್ರತಿನಿಧಿಗಳಲ್ಲ ಎಂಬುದನ್ನು ರಾಜ್ಯಪಾಲರು ಮರೆಯಬಾರದು

11:17 PM Nov 06, 2023 | Team Udayavani |

ಹೊಸದಿಲ್ಲಿ: “ರಾಜ್ಯಪಾಲರು ತಾವು ಚುನಾಯಿತ ಪ್ರತಿನಿಧಿಗಳು ಅಲ್ಲ ಎಂಬುದನ್ನು ಮರೆಯಬಾರದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಬಾಕಿ ಇರುವ ಮಸೂದೆಗಳ ಅಂಗೀಕಾರ ವಿಳಂಬ ವಿಚಾರ ದಲ್ಲಿ ರಾಜ್ಯ ಸರಕಾರ‌ಗಳು ಮತ್ತು ರಾಜ್ಯಪಾಲರ ನಡುವಿಗೆ ಸಂಘ ರ್ಷಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹೇಳಿಕೆ ನೀಡಿದೆ.

Advertisement

7 ಮಸೂದೆಗಳು ರಾಜ್ಯಪಾಲರ ಅನುಮೋದನೆಗೆ ಬಾಕಿ ಇದೆ ಎಂದು ಆರೋಪಿಸಿ ಪಂಜಾಬ್‌ ಸರಕಾರ‌ ಸುಪ್ರೀಂ ಮೊರೆ ಹೋಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃ ತ್ವದ ನ್ಯಾಯಪೀಠ, ಮಸೂದೆಗಳ ಕುರಿತು ರಾಜ್ಯಪಾಲರು ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿತು. ಇತ್ತೀಚೆಗೆ ತೆಲಂಗಾಣ, ಪಂಜಾಬ್‌ ಸೇರಿದಂತೆ ಕೆಲವು ರಾಜ್ಯ ಸರಕಾರ‌ಗಳು ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಅಧಿಕವಾಗಿದೆ. ಎರಡೂ ಕಡೆಯವರು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇದು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಕೂತು ಇತ್ಯರ್ಥ ಪಡಿಸುವ ವಿಷಯ ಎಂದು ನ್ಯಾಯಪೀಠ ಹೇಳಿತು.

 

Advertisement

Udayavani is now on Telegram. Click here to join our channel and stay updated with the latest news.

Next