Advertisement

ಮಂಗಳೂರು: ಎನ್‌ಎಂಪಿಎಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

10:50 PM Feb 02, 2023 | Team Udayavani |

ಮಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಮಧ್ಯಾಹ್ನ ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಕಚೇರಿಗೆ ಭೇಟಿ ನೀಡಿದರು.

Advertisement

ಎನ್‌ಎಂಪಿಎ ಅಧ್ಯಕ್ಷ ಡಾ| ಎ.ವಿ. ರಮಣ, ಉಪಾಧ್ಯಕ್ಷ ಕೆ.ಜಿ. ನಾಥ್‌ ಮತ್ತು ಬಂದರಿನ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.ರಾಜ್ಯಪಾಲರಿಗೆ ಎನ್‌ಎಂಪಿಎಯಲ್ಲಿನ ಹಲವಾರು ಮೂಲಸೌಕರ್ಯ ಮತ್ತು ತಾಂತ್ರಿಕ ಪ್ರಗತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು. ಬಂದರು ನಿರ್ವಹಣೆ, ಎಚ್‌ಪಿಸಿಎಲ್‌, ಯುಪಿಸಿಎಲ್‌ ಮತ್ತು ಇತರ ಸಂಸ್ಥೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಾಯಿತು.

ಬಂದರಿನಲ್ಲಿ “ಅಸ್ತಿತ್ವದಲ್ಲಿರುವ ವೇ ಬ್ರಿಜ್‌ಗಳನ್ನು ಸ್ವಯಂಚಾಲಿತ ಹಾಗೂ ಮಾನವರಹಿತವಾಗಿ ಮೇಲ್ದರ್ಜೆಗೇರಿಸುವ’ ಪ್ರಾಜೆಕ್ಟ್ ಗೆ ವರ್ಚುವಲ್‌ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next