ಕುಷ್ಟಗಿ: ಮಾರ್ಚ್ 22 ರಂದು ಪ್ರಥಮ ಬಾರಿಗೆ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಕುಷ್ಟಗಿಗೆ ಅಗಮಿಸಲಿದ್ದಾರೆ.
ತಾಲೂಕಿನ ನಿಡಶೇಸಿ ಕೆರೆ ಸಮೀಪದ ವಜ್ರಬಂಡಿ ಕ್ರಾಸ್ ನಲ್ಲಿರುವ ಅಮರೇಶ್ವರ ಮಹಾದೇವ ಮಠದ ನಾಗಾಸಾದು ಆಶ್ರಮದಲ್ಲಿ ಪಂಚಮುಖಿ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಆಗಮಿಸಲಿದ್ದಾರೆ.
ಮಾರ್ಚ್ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಮದ್ಯಾಹ್ನ 2 ಗಂಟೆಗೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಉದಯವಾಣಿಗೆ ಲಭ್ಯವಾಗಿದೆ.
ಕುಷ್ಟಗಿ ತಾಲೂಕಿನ ಇತಿಹಾಸದಲ್ಲಿ ರಾಜ್ಯಪಾಲರೊಬ್ವರು ಕುಷ್ಟಗಿ ಆಗಮಿಸುತ್ತಿರುವುದು ಇದೇ ಮೊದಲು ಎನ್ನುವ ಗರಿಮೆಗೆ ಕುಷ್ಟಗಿ ಪಾತ್ರ ಆಗಲಿದೆ.
Related Articles
ಮಾರ್ಚ್ 13ರಂದು ಕುಷ್ಟಗಿ ವಜ್ರಬಂಡಿ ಕ್ರಾಸ್ ಅಮರನಾಥೇಶ್ವರ ಮಠದ ಮಹಂತ ಸಹದೇವಾನಂದ ಗಿರೀಜಿ ಮಹಾರಾಜ್ ಅವರು, ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಿ ಪಂಚಮುಖಿ ದೇವಸ್ಥಾನಕ್ಕೆ ಆಗಮಿಸುವ ಮಾಹಿತಿ ಇದೆ.