Advertisement

ರಾಜ್ಯಪಾಲ ಗೆಹ್ಲೋಟ್ ರಿಂದ ಕಾರವಾರದಲ್ಲಿ ಕಡಲತೀರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

09:38 AM Sep 17, 2022 | Team Udayavani |

ಕಾರವಾರ: ಇಲ್ಲಿನ ರವೀಂದ್ರನಾಥ್ ಟಾಗೋರ್ ಕಡಲತೀರದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕಸ ಎತ್ತುವ ಮೂಲಕ ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌.

Advertisement

ಇದಕ್ಕೂ ಮುನ್ನ ಅವರು ಸಮುದ್ರ ಪೂಜೆ ಮಾಡಿದರು. 5 ಕಿಮೀ ಉದ್ದದ ಬೀಚ್ ಸ್ವಚ್ಛತೆಗೆ ಐದು ಸಾವಿರ ವಿದ್ಯಾರ್ಥಿಗಳು, ಯುವ ಜನರು, ಸಾರ್ವಜನಿಕರು ಭಾಗಿಯಾಗಿದ್ದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎನ್ ಸಿಸಿ ಕೆಡೆಟ್, ಎನ್ಎಸ್ಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next