Advertisement

ಉಡುಪಿ ತಾಯಿ, ಮಕ್ಕಳ ಆಸ್ಪತ್ರೆ : ಸರಕಾರದಿಂದಲೇ ನಿರ್ವಹಣೆ:  ಸಚಿವ ಡಾ|ಸುಧಾಕರ್‌ ಭರವಸೆ

11:28 PM Sep 22, 2021 | Team Udayavani |

ಬೆಂಗಳೂರು/ಉಡುಪಿ: ಉಡುಪಿಯ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಸರಕಾರವೇ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ್‌ ಹೇಳಿದ್ದಾರೆ.

Advertisement

ಉಡುಪಿ ಶಾಸಕ ರಘುಪತಿ ಭಟ್‌ ಅವರ  ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಸ್ಪತ್ರೆಯನ್ನು 70 ಹಾಸಿಗೆಯಿಂದ 200 ಹಾಸಿಗೆಗೆ ಹೆಚ್ಚಿಸಿ ಅಭಿವೃದ್ಧಿಪಡಿಸಲು  ಬಿ.ಆರ್‌.ಶೆಟ್ಟಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಸಂಸ್ಥೆ ಮುಖ್ಯಸ್ಥ ಬಿ.ಆರ್‌. ಶೆಟ್ಟಿ ಅವರು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ಈಗಾಗಲೇ ಕರ್ತವ್ಯ ನಿರ್ವಹಿಸುವ ಸಿಬಂದಿಯ ಜವಾಬ್ದಾರಿಯನ್ನು ಕೂಡ ಸರಕಾರವೇ  ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಜವಾಬ್ದಾರಿಯನ್ನು  ಸರಕಾರವೇ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು. ಆಸ್ಪತ್ರೆಯ ಕ್ಯಾಂಟೀನ್‌ ಸಹಿತ ಇತರ ಬಾಕಿ ಹಣ ಸುಮಾರು 5 ಕೋಟಿ ರೂ. ಇದೆ. ಅದನ್ನು ಕೂಡ  ಸರಕಾರವೇ  ತೀರಿಸಬೇಕಿದೆ ಎಂದು ರಘುಪತಿ ಭಟ್‌ ಆಗ್ರಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next