Advertisement

G-20: ಭಾರತ ಸರಕಾರವು ನೈಜ ಚಿತ್ರಣವನ್ನು ಮರೆಮಾಚುತ್ತಿದೆ: ರಾಹುಲ್‌ ಗಾಂಧಿ

11:47 PM Sep 09, 2023 | Team Udayavani |

ಹೊಸದಿಲ್ಲಿ: “ಜಿ20 ರಾಷ್ಟ್ರಗಳ ಅತಿಥಿಗಳ ಎದುರು ಭಾರತ ಸರಕಾರವು ದೇಶದ ನೈಜ ಚಿತ್ರಣವನ್ನು ಮರೆಮಾಚುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
“ನಮ್ಮ ಬಡವರು ಮತ್ತು ಪ್ರಾಣಿಗಳನ್ನು ಭಾರತ ಸರಕಾರವು ಮರೆಮಾಚುತ್ತಿದೆ. ನಮ್ಮ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳ ಎದುರು ಭಾರತದ ನೈಜ ಚಿತ್ರಣವನ್ನು ಮರೆಮಾಚುವ ಅಗತ್ಯವಿಲ್ಲ’ ಎಂದು ಐರೋಪ್ಯ ಒಕ್ಕೂಟದ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

Advertisement

ಜಿ20 ರಾಷ್ಟ್ರಗಳ ಪ್ರತಿನಿಧಿಗಳು ದಿಲ್ಲಿಯ ರಾಜ್‌ಘಾಟ್‌ದಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿರುವ ಬೀದಿ ನಾಯಿ ಗಳು, ಕೋತಿಗಳನ್ನು ಹಿಡಿಯಲು ದಿಲ್ಲಿ ಪೊಲೀಸರು ಶುಕ್ರವಾರ ನಾಗರಿಕ ಸಂಸ್ಥೆಗಳ ಸಹಕಾರ ಪಡೆದಿತ್ತು. ವರದಿಗಳ ಪ್ರಕಾರ, ಪೊಲೀಸರು ಸುತ್ತಮುತ್ತಲಿನ ಸ್ಲಮ್‌ಗಳನ್ನು ತೆರವು ಗೊಳಿಸಿದರು. ಸಂಸ್ಥೆಗಳ ಸಹಾಯದಿಂದ ಹಾವು, ಬೀದಿ ನಾಯಿಗಳು, ಕೋತಿಗಳನ್ನು ಹಿಡಿಯಲು ಸಿಬಂದಿಯನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next