Advertisement

ಸರ್ಕಾರ ಭ್ರಷ್ಟೋತ್ಸವ ಮಾಡುವಲ್ಲಿ ಹೆಚ್ಚು ಸಕ್ರಿಯ: ಪ್ರಿಯಾಂಕ್‌ ಖರ್ಗೆ

09:21 PM Sep 05, 2022 | Team Udayavani |

ಬೆಂಗಳೂರು: ಸರ್ಕಾರಕ್ಕೆ ಜನೋತ್ಸವ ಮಾಡುವ ಯಾವ ನೈತಿಕತೆ ಅಥವಾ ಯೋಗ್ಯತೆಯೂ ಇಲ್ಲ. ಬದಲಿಗೆ ಭ್ರಷ್ಟೋತ್ಸವ ಮಾಡುತ್ತಿದೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನೋತ್ಸವ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ಒಂದೇ ಒಂದು ಸಾಧನೆ ಇಲ್ಲ. ಜನೋತ್ಸವ 2-3 ಬಾರಿ ಮುಂದೂಡಲ್ಪಟ್ಟಿದ್ದು ಯಾಕೆ? ಜನರ ಆಕ್ರೋಶದಿಂದಲೇ ಹೊರತು, ಬೇರೆ ಕಾರಣ ಇಲ್ಲ. ಸರ್ಕಾರ ಭ್ರಷ್ಟೋತ್ಸವ ಮಾಡುವಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ಆರೋಪಿಸಿದರು.

ಈ ಸರ್ಕಾರದಲ್ಲಿ ಬೆಂಗಳೂರು ಉಸ್ತುವಾರಿ ಸಚಿವರಿಲ್ಲ ಯಾಕೆ? ಬೆಂಗಳೂರು ಉಸ್ತುವಾರಿಗೆ 40 ಪರ್ಸೆಂಟ್‌ ಬದಲು 50 ಪರ್ಸೆಂಟ್‌ ಕಮಿಷನ್‌ ಇದೆ ಎಂದು ಅವರು ಉಸ್ತುವಾರಿಗಾಗಿ ಕಿತ್ತಾಡುತ್ತಿದ್ದಾರಾ? ಕಳೆದ ಮೂರು ವರ್ಷಗಳಿಂದ ಇಷ್ಟು ಧಾರಾಕಾರ ಮಳೆ ಸುರಿದು ವ್ಯವಸ್ಥೆ ಇಷ್ಟು ಹದಗೆಟ್ಟಿದ್ದರೂ ಸರ್ಕಾರಕ್ಕೆ ಯಾಕೆ ಒಂದು ಟಾಸ್ಕ್ ಫೋರ್ಸ್‌ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಐಟಿ ಉದ್ಯಮಿಗಳು ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ಬರೆದಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಿಂಪಡೆಯುವುದಾಗಿ ಹೇಳಿದ್ದಾರೆ. ಸಿಲಿಕಾನ್‌ ಸಿಟಿಯನ್ನು ಈ ಸರ್ಕಾರ “ಸಿಂಕಿಂಗ್‌ ಸಿಟಿ’ಯನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next