Advertisement

ಸರಕಾರಿ ಉದ್ಯೋಗ ಆಮಿಷ: 10 ಲಕ್ಷ ರೂ. ವಂಚನೆ

11:41 PM Aug 07, 2022 | Team Udayavani |

ಗಂಗೊಳ್ಳಿ: ತ್ರಾಸಿ ಗ್ರಾಮದ ರೆಹಾನ್‌ ಮಂಜಿಲ್‌ನ ರೆಹಾನ್‌ ಅಹ್ಮದ್‌ ಅವರ ಬಳಿ ಲತೇಶ್‌ ಸಂಜೀವ್‌ ಕುಂಬ್ಲೆ ಎನ್ನುವ ವ್ಯಕ್ತಿ ಸರಕಾರಿ ಉದ್ಯೋಗ ಕೊಡಿಸುವುದಾಗಿ 10 ಲಕ್ಷ ರೂ. ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ಒಂದು ವರ್ಷದ ಹಿಂದೆ ಪರಿಚಿತನಾದ ಲತೇಶ್‌ ಸಂಜೀವ ಕುಂಬ್ಲೆ , ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿರುವುದಾಗಿ, ಅವರ ಜತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿದ್ದ. ಅನಂತರ ರೆಹಾನ್‌ ಅವರ ಅಕ್ಕ ಸಬೀನಾ ಅಖ್ತರ್‌ ಅವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 10 ಲಕ್ಷ ರೂ. ಹಣವನ್ನು ಕೇಳಿದ್ದು, ರೆಹಾನ್‌ ಅಹಮ್ಮದ್‌ ಆ ಹಣವನ್ನು ಬ್ಯಾಂಕ್‌ ಮೂಲಕ ವರ್ಗಾಯಿಸಿದ್ದರು.

ಚೆಕ್‌ ಬೌನ್ಸ್‌
ಹೇಳಿದಂತೆ ಕೆಲಸ ಕೊಡಿಸಿಲ್ಲವೆಂದು ಹಣ ಕೇಳಿದಾಗ 6 ಲಕ್ಷ ರೂ. ಮರಳಿ ನೀಡುವುದಾಗಿ ಕೊಟ್ಟ ಚೆಕ್‌ ಹಣವಿಲ್ಲವೆಂದು ಮರಳಿ ಬಂದಿದೆ. ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next