Advertisement

ನಿರುದ್ಯೋಗ ಸಮಸ್ಯೆಗೆ ಸರಕಾರ ಕಾರಣ

11:22 AM May 13, 2022 | Team Udayavani |

ಉಡುಪಿ: ನಿರುದ್ಯೋಗ ಸಮಸ್ಯೆಗೆ ಕಾರಣ, ಶೇ.40 ಭ್ರಷ್ಟ ಬಿಜೆಪಿ ಸರಕಾರ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಗುರುವಾರ ಬನ್ನಂಜೆ ಕೆಎಸ್‌ಆರ್‌ಟಿಸಿ ನಿಲ್ದಾಣ ಸಮೀಪ ಪ್ರತಿಭಟನೆ ನಡೆಯಿತು.

Advertisement

ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ನಲಪ್ಪಾಡ್‌ ಮಾತನಾಡಿ, ಶಿರ್ವ ಎಡ್ಮೇರುವಿನ ಎಂಬಿಎ ಪದವೀಧರೆ ಸಹನಾ ಅವರ ಆತ್ಮಹತ್ಯೆಗೆ ರಾಜ್ಯ, ಕೇಂದ್ರ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದರು. ದೇಶದಲ್ಲಿ ನಿರುದ್ಯೋಗದಿಂದ ಯುವ ಜನರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿದೆ. ಶೇ.40 ಕಮಿಷನ್‌ ಮೂಲಕ ಜನರ ತೆರಿಗೆ ದುಡ್ಡನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರಕಾರಕ್ಕೆ ಜನರೆ ಬುದ್ಧಿ ಕಲಿಸುತ್ತಾರೆ. ನೇಮಕಾತಿ, ಅಭಿವೃದ್ಧಿ ಯೋಜನೆಗಳು ಎಲ್ಲವೂ ಅಕ್ರಮಗಳಿಂದಲೇ ಕೂಡಿವೆ. ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭ ರಾಜ್ಯ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಭವ್ಯಾ ಕೆ.ಆರ್., ಪ್ರಧಾನ ಕಾರ್ಯದರ್ಶಿ ನಾಸಿರ್‌, ಜಿಲ್ಲಾಧ್ಯಕ್ಷ ದೀಪಕ್‌ ಕೋಟ್ಯಾನ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆ ಸುದಯ ಅಂಜುಂ, ಪ್ರಮುಖರಾದ ಗಿರೀಶ್‌ ಆಳ್ವ, ಮಂಜು, ಪ್ರಭಾಕರ್‌ ಆಚಾರ್ಯ ಮತ್ತು ಕಾಂಗ್ರೆಸ್‌ ಮುಖಂಡರಾದ ಪ್ರಖ್ಯಾತ್‌ ಶೆಟ್ಟಿ, ಯತೀಶ್‌ ಕರ್ಕೇರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next