ಬೆಂಗಳೂರು :ಮೋದಿ ಸರಕಾರ ಎಂಟು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪುಸ್ತಕ ಬಿಡುಗಡೆ ಮಾಡಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.
Advertisement
ಜುಲೈ ಒಂದಕ್ಕೆ ಪುಸ್ತಕ ಬಿಡುಗಡೆಯಾಗಲಿದ್ದು, ಮೋದಿ ಎಂಟು ವರ್ಷಗಳಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
‘ಎಂಟು ವರ್ಷ ನೂರೆಂಟು ಸಂಕಷ್ಟ’ಅನ್ನುವ ಶೀರ್ಷಿಕೆ ಇರುವ ಪುಸ್ತಕ ಇದಾಗಿದ್ದು, ನೋಟ್ ಬ್ಯಾನ್ ಮತ್ತು ರೈತ ವಿರೋಧಿ ಕಾನೂನು ಸೇರಿದಂತೆ ಸರ್ಕಾರದ ಹಲವು ಗೊಂದಲ, ನಿರ್ಧಾರಗಳ ಬಗ್ಗೆ ಸಿದ್ದರಾಮಯ್ಯ ಅವರು ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.