Advertisement

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

10:20 PM Sep 20, 2024 | Team Udayavani |

ಮಂಡ್ಯ: ರಾಜ್ಯ ಸರಕಾರವೇ ಕೇರಳದಿಂದ ಬಂದ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಮಂಡ್ಯದಲ್ಲಿ ಚುನಾಯಿತ ಪ್ರತಿನಿ ಧಿಗಳು ಹಿಂದೂ ವಿರೋ ಧಿ ಧೋರಣೆ ತಾಳುತ್ತಿದ್ದಾರೆ. ಮೊದಲು ಹನುಜ ಧ್ವಜಕ್ಕೆ ಅಗೌರವ, ಇದೀಗ ಮತ್ತೆ ಗಣೇಶೋತ್ಸವದ ವೇಳೆ ಕಲ್ಲು , ಬಾಂಬ್‌ ಎಸೆದಿದ್ದಾರೆ. ಮಂಡ್ಯದಲ್ಲಿ ಶೇ. 95 ಪಸೆಂìಟ್‌ ಹಿಂದೂಗಳಿದ್ದಾರೆ. ಕಾಂಗ್ರೆಸ್‌ ಸರಕಾರಕ್ಕೆ ಕಾಮನ್‌ ಸೆನ್ಸ್‌ ಇಲ್ಲವಾಗಿದೆ. ಒಬ್ಬ ವಿಪಕ್ಷ ನಾಯಕನ ಮೇಲೆ ಕೇಸ್‌ ದಾಖಲಿಸಿದೆ.

ಗಣೇಶಮೂರ್ತಿ ವಿಸರ್ಜನೆ ವೇಳೆ ಬಂದೋಬಸ್ತ್ ವ್ಯವಸ್ಥೆ ಮಾಡದೇ ಕಾಂಗ್ರೆಸ್‌ನವರೇ ಗಲಾಟೆ ಮಾಡಿಸಿದ್ದಾರೆ. ಕಾಂಗ್ರೆಸ್‌ ಸರಕಾರ ಬಂದ ಮೇಲೆ ಮುಸ್ಲಿಂ ಕೋಮುವಾದಿಗಳು ಎದ್ದು ಕುಳಿತ್ತಿದ್ದು, ಅವರ ಬೆನ್ನಿಗೆ ಕಾಂಗ್ರೆಸ್‌ನವರಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next