ನವದೆಹಲಿ: ಆಸ್ಕರ್ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ ಭಾಷಣವನ್ನು ಸಂಗೀತದಿಂದ ಕಡಿತಗೊಳಿಸಿದಾಗ ನನಗೆ ದೊಡ್ಡ ಆಘಾತ ಉಂಟಾಯಿತು ಎಂದು “ದಿ ಎಲಿಫೆಂಟ್ ವಿಸ್ಪರರ್ಸ್” ನಿರ್ಮಾಪಕಿ ಗುನೀತ್ ಮೊಂಗಾ ಶುಕ್ರವಾರ ಹೇಳಿದ್ದಾರೆ.
ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ ಚಲನಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಶುಕ್ರವಾರ ಬೆಳಗ್ಗೆ ಚಿನ್ನದ ಕಿರು ಪ್ರತಿಮೆಯೊಂದಿಗೆ ತವರಿಗೆ ಮರಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೊಂಗಾ”ನಾನು ಋಣಿಯಾಗಿದ್ದೇನೆ. ಇದೊಂದು ಆಶೀರ್ವಾದ ಎಂದು ನನ್ನ ಭಾವನೆ. 1.4 ಶತಕೋಟಿ ಜನರು ಇದನ್ನು ಒಟ್ಟಿಗೆ ವ್ಯಕ್ತಪಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಇದು ಅತಿವಾಸ್ತವಿಕವಾಗಿದೆ” ಎಂದರು.
ತಮಿಳು ಸಾಕ್ಷ್ಯಚಿತ್ರ ಕಿರುಚಿತ್ರವು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಿರ್ಮಾಣವಾಯಿತು. ಪ್ರಶಸ್ತಿಯನ್ನು ಮಹಿಳೆಯರಿಬ್ಬರಿಗೆ ನೀಡಲಾಗಿತ್ತು ಗೊನ್ಸಾಲ್ವೆಸ್ ಅವರು ತಮ್ಮ ಗೆಲುವನ್ನು “ಮಾತೃಭೂಮಿ ಭಾರತಕ್ಕೆ” ಅರ್ಪಿಸಿದ್ದಾರೆ.
Related Articles
“ಸಂಗೀತದಿಂದ ನನ್ನ ಮಾತು ಕಡಿತಗೊಂಡಾಗ ನನಗೆ ದೊಡ್ಡ ಆಘಾತವಾಯಿತು. ನಾನು ವೇದಿಕೆಯಲ್ಲಿದ್ದೆ ಆದರೆ ಇದು ಭಾರತೀಯ ನಿರ್ಮಾಣಕ್ಕಾಗಿ ಭಾರತದ ಮೊದಲ ಆಸ್ಕರ್ ಎಂದು ನಾನು ಗಟ್ಟಿಯಾಗಿ ಮೈದಾನದಲ್ಲಿದ್ದ ಜನರಿಗೆ ಹೇಳಿದೆ ಮತ್ತು ನಂತರ ಎಲ್ಲರೂ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು ”ಎಂದು ಮೊಂಗಾ ಆಸ್ಕರ್ ಪ್ರಶಸ್ತಿಯನ್ನು ಎತ್ತಿ ಹಿಡಿದು ಅನುಭವ ಹಂಚಿಕೊಂಡಿದ್ದಾರೆ.
ಮೊಂಗಾ ಅವರು ಮೈಕ್ನತ್ತ ನಡೆದಾಗ, ಸಂಗೀತವು ಅವರ ಮಾತನ್ನು ನಿಲ್ಲಿಸುವುದನ್ನು ಸೂಚಿಸಿತು ಮತ್ತು ತಂಡವನ್ನು ವೇದಿಕೆಯಿಂದ ಹೊರಗೆ ಕರೆದೊಯ್ಯಲಾಗಿತ್ತು.