Advertisement

Gangolli ಬೈಕ್‌ಗೆ ಗೂಡ್ಸ್‌ ಢಿಕ್ಕಿ ; ಸವಾರನಿಗೆ ಗಾಯ

09:31 PM Sep 29, 2023 | Team Udayavani |

ಗಂಗೊಳ್ಳಿ: ನಾಯಕವಾಡಿಯಲ್ಲಿ ಬೈಕ್‌ಗೆ ರಿಜ್ವಾನ್‌ ಅವರ ಗೂಡ್ಸ್‌ ವಾಹನ ಢಿಕ್ಕಿಯಾಗಿ, ಬೈಕ್‌ ಸವಾರ ರಾಮ ಮೊಗವೀರ ಗಾಯಗೊಂಡ ಘಟನೆ ಸೆ.27 ರಂದು ಸಂಜೆ 6.45 ರ ಸುಮಾರಿಗೆ ಸಂಭವಿಸಿದೆ.

Advertisement

ಗಾಯಗೊಂಡ ರಾಮ ಮೊಗವೀರ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗಳ ನಡುವೆ ಅಪಘಾತ
ಗಂಗೊಳ್ಳಿ: ಹರ್ಕೂರು ಗ್ರಾಮದ ಕೊಡಗಿಪಾರಿ ತಿರುವು ಬಳಿ ಬೈಕ್‌ಗಳ ನಡುವೆ ಅಪಘಾತವಾಗಿದೆ. ಆಲೂರು ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಹೋಗುತ್ತಿದ್ದ ಸುಧಾಕರ ಅವರ ಬೈಕ್‌ ಮುಳ್ಳಿಕಟ್ಟೆ ಕಡೆಯಿಂದ ಆಲೂರು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿದೆ. ಪರಿಣಾಮ ಸವಾರ ಕಾರ್ತಿಶ್‌ಗೆ ಗಾಯವಾಗಿದೆ. ಪ್ರಕರಣ ದಾಖಲಾಗಿದೆ.

ವಂಚನೆ, ನಂಬಿಕೆ ದ್ರೋಹ: ಕೇಸು
ಕುಂದಾಪುರ: ಆರೋಪಿ ಪ್ರಕಾಶ್‌ ಎಚ್‌. ಎಂಬಾತ ತನ್ನಿಂದ ಉದ್ಯಮ ಮಾಡುವ ಸಲುವಾಗಿ 10 ಲಕ್ಷ ರೂ. ಹಣ ಪಡೆದು, ಬಳಿಕ ಅದನ್ನು ವಾಪಸು ನೀಡದೆ ವಂಚಿಸಿ, ನಂಬಿಕೆ ದ್ರೋಹ ಮಾಡಿರುವುದಾಗಿ ಬೇಬಿ ಮೊಗವೀರ ಅವರು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕಾಶ್‌ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next