Advertisement

ಕಾರ್ಕಳ ತಾಲೂಕಿನ ವಿವಿಧೆಡೆ ಉತ್ತಮ ಮಳೆ

10:37 PM Apr 10, 2021 | Team Udayavani |

ಕಾರ್ಕಳ: ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆ ವೇಳೆಗೆ ಉತ್ತಮ ಬೇಸಗೆ ಮಳೆಯಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಸುಮಾರು ಅರ್ಧ ತಾಸು ತನಕ ಮಳೆಯಾಗಿದೆ.

Advertisement

ದಿನವಿಡೀ ತೀವ್ರ ಸೆಖೆಯ ವಾತಾವರಣವಿತ್ತು. ಸಂಜೆ ವೇಳೆಗೆ ಸುರಿದ ಮಳೆ ಇಳೆಯನ್ನು ತಂಪಾಗಿಸಿತು. ಜನರೂ ಇದರಿಂದ ತುಸು ಚೇತರಿಕೆಗೊಂಡರು.

ಅಜೆಕಾರು ಪರಿಸರ
ಅಜೆಕಾರು ಸುತ್ತಮುತ್ತಲ ಗ್ರಾಮಗಳಲ್ಲಿ ಎ.10ರ ಸಂಜೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳಾದ ಕೆರ್ವಾಶೆ, ಶಿರ್ಲಾಲು, ಮಾಳ, ಅಂಡಾರು, ಮುಟ್ಲುಪಾಡಿಯಲ್ಲಿ ಭಾರೀ ಮಳೆಯಾಗಿದೆ.

ಅಜೆಕಾರು, ಹೆರ್ಮುಂಡೆ, ಮುನಿಯಾಲು, ಕುಕ್ಕುಜೆ, ಕಡ್ತಲ, ಹಿರ್ಗಾನ ಪರಿಸರದಲ್ಲಿ ಗಾಳಿ, ಸಿಡಿಲು ಸಹಿತ ಮಳೆಯಾಗಿದೆ.
ಗ್ರಾಮೀಣ ಭಾಗಗಳಲ್ಲಿ ಬೇಸಗೆ ಮಳೆ ಪ್ರತಿದಿನ ಸುರಿಯುತ್ತಿರುವುದರಿಂದ ಮಳೆಗಾಲಕ್ಕೆ ಕೃಷಿಗೆ ಪೂರಕವಾದ ವಸ್ತುಗಳಾದ ತರಗೆಲೆ, ಕಟ್ಟಿಗೆ ಸಂಗ್ರಹಿಸಲು ಗ್ರಾಮೀಣ ಜನತೆಗೆ ಸಮಸ್ಯೆಯಾಗಿದೆ.

ಇದನ್ನೂ ಓದಿ :ನಿಯಮ ಮೀರಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ : “ಅಲಿಬಾಬಾ’ಗೆ 20 ಸಾವಿರ ಕೋಟಿ ರೂ. ದಂಡ

Advertisement

ಕೆರ್ವಾಶೆಯಲ್ಲಿ ಆಲಿಕಲ್ಲು ಮಳೆ
ಕೆರ್ವಾಶೆ ಭಾಗದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಆಲಿಕಲ್ಲು ಮಳೆಯೂ ಸುರಿದಿದೆ. ಇದರಿಂದ ಕೃಷಿಗೆ ಅಪಾರ ನಷ್ಟವುಂಟಾಗಿದೆ. ಹಲವೆಡೆಗಳಲ್ಲಿ ತೆಂಗು, ಅಡಿಕೆ ಮರಗಳು ನೆಲಕ್ಕೊರಗಿವೆ. ಜತೆಗೆ ಮರಗಳು ವಿದ್ಯುತ್‌ ಕಂಬದ ಮೇಲೆ ಬಿದ್ದಿವೆ. ಕೆಲವೆಡೆಗಳಲ್ಲಿ ಮನೆಗಳ ಛಾವಣಿಗೂ ಹಾನಿಯುಂಟಾಗಿವೆ. ಮಳೆಯಿಂದಾದ ಒಟ್ಟು ನಷ್ಟದ ಬಗ್ಗೆ ಇನ್ನಷ್ಟೇ ಅಂದಾಜಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next