Advertisement
ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಸಮಯ ವಿಸ್ತರಣೆ ಮಾಡಿದ್ದರಿಂದ ವಯೋಮಿತಿ ಹೆಚ್ಚಾಗಿ ಸಾವಿರಾರು ಆಕಾಂಕ್ಷಿಗಳು ಅವಕಾಶ ವಂಚಿತರಾಗುತ್ತಿದ್ದರು.
Related Articles
ಪೊಲೀಸ್ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್ಟೆಬಲ್ ಸಿವಿಲ್ 558, ಸಶಸ್ತ್ರ ಕಾನ್ಸ್ಟೆಬಲ್ 444, ಪೊಲೀಸ್ ಕಾನ್ಸ್ಟೆಬಲ್ 2,007, ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ 1,005, ಕೆಎಸ್ಆರ್ಪಿಗೆ 2,420 ಹಾಗೂ ಕೆಎಸ್ಆರ್ಪಿ ಬ್ಯಾಂಡ್ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಸರಕಾರ ಮಾರ್ಚ್ ಅಂತ್ಯದ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.
Advertisement
ಆದರೆ ಲಾಕ್ಡೌನ್ನಿಂ ದಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿತ್ತು. ಆದರೆ ವಯೋಮಿತಿಯಲ್ಲಿ ಬದಲಾವಣೆ ಮಾಡಿರಲಿಲ್ಲ. ಇದರಿಂದಾಗಿ ಮಾರ್ಚ್ ಕೊನೆಗೆ 27 ವರ್ಷ ಭರ್ತಿಯಾದವರು ಅವಕಾಶ ವಂಚಿತರಾಗಿದ್ದರು. ಅಲ್ಲದೆ ಅರ್ಜಿ ಸಲ್ಲಿಸುವಾಗಲೆ ವಯೋಮಿತಿಗೆ ಸಂಬಂಧಿಸಿದ ದಾಖಲೆಯನ್ನು ಆನ್ ಲೈನ್ನಲ್ಲಿ ಅಪ್ಲೋಡ್ ಮಾಡಬೇಕಿರುವುದರಿಂದ ಅವರ ವಯೋಮಿತಿ ಮೀರಿದೆ ಎಂದು ಆನ್ ಲೈನ್ನಲ್ಲಿ ಅರ್ಜಿಯನ್ನೇ ಸ್ವೀಕರಿಸದಿರುವುದರಿಂದ ಪೊಲೀಸ್ ನೌಕರಿಯ ಕನಸು ಕಂಡ ಯುವಕ, ಯುವತಿಯರು ಅಸಹಾಯಕರಾಗಿದ್ದರು.
ಲಾಕ್ಡೌನ್ ಪರಿಣಾಮ ಪೊಲೀಸ್ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದರೂ ವಯೋಮಿತಿ ಹೆಚ್ಚಳವಾಗದಿರುವ ಕುರಿತು ಹಿರಿಯ ಅಧಿಕಾರಿಗಳ ಜತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ವಯೋಮಿತಿ ಸಡಿಲಿಸಿ ಮಾ. 31ರಿಂದಲೇ ಅರ್ಹತೆ ಪರಿಗಣಿಸುವ ಬಗ್ಗೆ ಚಿಂತನೆ ಇದೆ.
ರಾಜ್ಯ ಸರಕಾರ ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸಲು ಎರಡು ವರ್ಷ ವಿನಾಯಿತಿ ನೀಡಿದೆ. ಕೋವಿಡ್ 19 ಸಂದರ್ಭ ಸಂಕಷ್ಟಕ್ಕೆ ಸಿಲುಕಿರುವ ಎಲ್ಲರಿಗೂ ಸರಕಾ ರಗಳು ವಿನಾಯಿತಿ ನೀಡುತ್ತಿವೆ. ಅದೇ ಮಾನದಂಡ ಪರಿಗಣಿಸಿ ಕಾನ್ಸ್ಟೆಬಲ್ ಹುದ್ದೆಗೆ ಲಾಕ್ಡೌನ್ ಸಮಯದ ಅವಧಿಯನ್ನು ವಯೋಮಿತಿ ಸಡಿಲಿಕೆ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರಕಾರ ಮುಂದಾಗಿದೆ.