Advertisement

ಬಾನದಾರಿಯಿಂದ ಹಾಡು ಬಂತು

02:46 PM Mar 15, 2023 | Team Udayavani |

ನಟ ಗಣೇಶ್‌ ನಾಯಕರಾಗಿರುವ “ಬಾನದಾರಿಯಲಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇನ್ನು, “ಬಾನದಾರಿಯಲಿ’ ಚಿತ್ರಕ್ಕೆ “ನೋಡು ಎಂಥ ಚೆಂದ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ.

Advertisement

ಈಗಾಗಲೇ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ಕಾಂಬಿನೇಶನ್‌ನಲ್ಲಿ”ಮಳೆಯಲಿ ಜೊತೆಯಲಿ’,”ದಿಲ್‌ ರಂಗೀಲಾ’ ಹಾಗೂ”99′ ಚಿತ್ರಗಳು ಬಂದಿವೆ. ಈಗನಾಲ್ಕನೇ ಬಾರಿ ಜೊತೆಯಾಗಿದ್ದಾರೆ.

“ಶ್ರೀವಾರಿ ಟಾಕೀಸ್‌’ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್‌ ಹಾಗೂ ವೇಣು ಬಂಡವಾಳ ಹಾಕಿದ್ದಾರೆ. ಈಗ ಚಿತ್ರದ “ಬಾನದಾರಿಯಲ್ಲಿ ಹೋದೆ ಎಲ್ಲಿ’ ಎಂಬ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಖುಷಿಯಾಗಿದೆ.

ಈಗಾಗಲೇ ಕವಿರಾಜ್‌ ಅವರು ಬರೆದಿರುವ “ನಿನ್ನನ್ನುನೋಡಿದ ನಂತರ..’ ಎಂಬ ಗೀತೆ ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿ, ಹಿಟ್‌ಲಿಸ್ಟ್‌ ಸೇರಿದೆ. ಈಗ “ಬಾನದಾರಿಯಲ್ಲಿ ಹೋದೆ ಎಲ್ಲಿ’ ಸರದಿ. ಚಿತ್ರದ ಬಗ್ಗೆ ಮಾತನಾಡುವ ನಟ ಗಣೇಶ್‌, ಸಾಮಾನ್ಯವಾಗಿ ನಾನು ಡಬ್ಬಿಂಗ್‌ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್‌ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ಈ ಚಿತ್ರದಲ್ಲಿ ಕ್ರಿಕೆಟ್‌ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ.

ಇನ್ನು ನಿರ್ದೇಶಕ ಪ್ರೀತಂ ಗುಬ್ಬಿ ಕೂಡಾ ಚಿತ್ರದ ಬಗ್ಗೆ ಖುಷಿಯ ಮಾತುಗಳನ್ನಾಡುತ್ತಾರೆ. “ಗಣೇಶ್‌ ಅವರ ಜೊತೆ ಸಿನಿಮಾ ಮಾಡೋದು ಒಂದು ಖುಷಿ. ಒಳ್ಳೆಯ ಗೆಳೆಯ. ನಿರ್ದೇಶಕರ ಕಲ್ಪನೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಜೀವ ತುಂಬುವ ಕಲೆ ಗಣೇಶ್‌ ಅವರಿಗಿದೆ’ ಎನ್ನುವುದು ಗುಬ್ಬಿ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next